Friday, March 29, 2024

Walk of Fame and Pantages Theatre


The city of Los Angeles is often referred to as the "Entertainment Capital of the World". This term is also used for Las Vegas for the reason of the variety of entertainment available there, including luxurious and large casino-hotels. Los Angeles is a older city and official history dates back to the year 1781, though native inhabitants have been living here since much before. Las Vegas was founded in 1905 and is a relatively new city. Los Angeles is the city known for movie production at its Hollywood area. The movie industry in Hollywood is now over a century old and its many famous studios have been cradle of development of the film industry. Universal, Paramount, Walt Disney, MGM, 20th Century Fox, Sony and other major film studios were instruments for the growth of the movie industry and thereby providing entertainment all over the world. 

Growth of movie industry in different parts of the world over the last few decades notwithstanding, Hollywood continues to be a great centre for movie making. Ramoji Film City near Hyderabad, India, is considered as the biggest film making facility in the world nowadays. Mumbai and Chennai have been big film producing centres for several decades. Mumbai's film system, popularly known as Bollywood, produces nearly double the number of movies produced in the USA. The total number of movies produced in India, all languages put together, nears 3000 in most years!

The growth in the movie industry has been possible due to the contributions of many people over the years. Producers, directors, technicians, film stars and assistant production staff have all made their contributions. As in any other industry, contributions of some people stand out among all the innumerable contributors. The world has many ways of recognising major contributors in all walks of life. Hollywood too has its own methods. The annual Academy Awards, popularly known as Oscars, is one of them. 

"Hollywood Walk of Fame" is a well established system of identifying and recognising substantial contributions of individuals to the movie industry. The area around "Hollywood Boulevard" and the adjoining "Vine Street" was chosen as the venue for this honours as people keep visiting these areas daily and it would be a good place to perpetuate the memory of these achievers. Stars are made for the achievers and embedded on the footpath in this area. Tourists coming to Los Angeles find this "Walk of Fame" an important destination to visit. This practice started in the year 1958 and continues for the last 66 years. So far 2,775 stars are placed, including the one of Andre Romell Young, popularly known as Dr Dre, identified in the recording discipline and included last week, on 19th March, 2024.

*****

Pantages Theatre stands on Hollywood Boulevard. It is a landmark in Hollywood and was the location for the Academy Awards (Oscars) ceremony for some ten years. Alexander Pantages was the creator of many theatres in westren part of USA and Canada. This theatre carries his name as Pantages theatre and is said to be his last theatre. It was made ready and opened on 4th June, 1930. It will be celebrating its centenary year in six years. The theatre ownership has changed many hands over the years. Its uses also have been varied over the years; as a stage show theatre, movie theatre, venue for oscar awards etc. Since 1977 it is used exclusively for stage shows presenting different shows including pop shows and Broadway musicals. 

For getting into the pantages theatre, one has to cross some of the stars embedded on the pathway in Hall of Fame. The grandeur of the theatre has been maintained even with many modifications and changes made to the building over the years. The theatre can accomodate 2,691 viewers for a show. The lobby is marvellous with its zigzags, starbursts, chevrons and exotic figures.  Most of the shows run to full houses. Guests coming to the shows are provided paid parking facilities close to the theatre. The gold and silver coloured decor in multiple geometric patterns is a delightful sight. The live Broadway productions are a big hit with the art loving people of the city as well as tourists. Despite the huge size of the theatre, it is difficult to get tickets for the shows and plays get sold out weeks in advance. A ticket costs anywhere between 150 dollars to 1,000 dollars depending on the show, view of the stage, show time and day of the week.

*****

New York's Broadway shows are very popular but one cannot always go to New York to see the shows. Broadway has two sets of artistes putting up the shows. One set of artistes stay in New York and produce shows there. Another set of artistes are on tour and perform in over 200 cities of North America. These shows are known for their artistic value and great entertainment as well. Students of music, drama and theatre can learn a lot about stage management, creation of sets, and overall production of plays and sustaining them for years. 

We had an opportunity to watch a show of "To Kill a Mocking Bird" at the Pantages theatre in September last year. One may recall that the film with the same name made in 1962 got an Oscar award for best actor to Gregory Peck. It was a great experience. The experience of a live show is entirely different from that of a movie. 

One of the most popular broadway productions is "Chicago, the Musical". It is being staged since 1975 and yet runs to packed houses wherever it is staged. We had an opportunity to watch this live show last fortnight. It was another wonderful experience!

Tuesday, March 19, 2024

ಡಾ. ವಸಂತ ಕವಲಿ - ಒಂದು ನೆನಪು


ಅಮೇರಿಕ ಸಂಯುಕ್ತ ಸಂಸ್ಥಾನಗಳ ಲಾಸ್ ಎಂಜೆಲೆಸ್ ನಗರ ವಿಶ್ವದ ಹೆಸರಾಂತ ನಗರಗಳಲ್ಲೊಂದು. ಇಲ್ಲಿನ "ಹಾಲಿವುಡ್" ಜಗತ್ತಿನ ಮನರಂಜನೆ ರಾಜಧಾನಿ ಎಂದು ಪ್ರಸಿದ್ಧ. ಹಾಲಿವುಡ್ ಮಾದರಿಯಲ್ಲಿಯೇ ನಮ್ಮಲ್ಲಿ ಬಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್, ಕೊಲಿವುಡ್ ಮುಂತಾಗಿ ಮನರಂಜನೆಯ ಸ್ಥಳಗಳನ್ನು ಗುರುತಿಸುತ್ತಾರೆ. ಹಾಲಿವುಡ್ ಪ್ರದೇಶದ "ಹಾಲಿವುಡ್ ಬುಲ್ವಾರ್ಡ್" ಮತ್ತು ಅದರ ಪಕ್ಕದ "ವೈನ್ ಸ್ಟ್ರೀಟ್" ರಸ್ತೆಗಳ ನಡೆದಾಡುವ ಜಾಗಗಳಲ್ಲಿ ಮನರಂಜನೆಯ ಜಗತ್ತಿನ ಪ್ರಸಿದ್ಧ ಸಾಧಕರ ಹೆಸರುಗಳುಳ್ಳ ನಕ್ಷತ್ರಗಳನ್ನು ರಚಿಸಿದ್ದಾರೆ. "ಹಾಲಿವುಡ್ ವಾಕ್ ಆಫ್ ಫೇಮ್" ಎಂದು ಹೆಸರು ಪಡೆದ ಈ ಪ್ರದೇಶವನ್ನು ನೋಡಲು ಈ ನಗರಕ್ಕೆ ಬಂದ ಪ್ರವಾಸಿಗರು ತಪ್ಪದೆ ಬರುತ್ತಾರೆ. 

1958ರಲ್ಲಿ ಪ್ರಾರಂಭವಾದ ಈ ಪದ್ಧತಿ ಕಳೆದ 66 ವರ್ಷಗಳಿಂದ ನಡೆದು ಬಂದಿದೆ. ಇಲ್ಲಿನವರೆಗೆ 2,774 ಕಲಾಸಾಧಕರ ನಕ್ಷತ್ರಗಳನ್ನು "ವಾಕ್ ಆಫ್ ಫೇಮ್" ನಲ್ಲಿ ಅಳವಡಿಸಲಾಗಿದೆ. ಈ ದಿನ ಮಂಗಳವಾರ, ಮಾರ್ಚ್ 19, 2024. ಈ ದಿನ ಡಾ. ಡ್ರೇ ಎಂದು ಪ್ರಸಿದ್ಧರಾದ ಡಾ. ಅಂಡ್ರೆ ಯಂಗ್ ಅವರ ನಕ್ಷತ್ರವನ್ನು 2775ನೆಯ ನಕ್ಷತ್ರವಾಗಿ ಸೇರಿಸುತ್ತಿದ್ದಾರೆ. ಈಗ ಈ ಕಾರ್ಯಕ್ರಮ ಇದೇ ಸಮಯದಲ್ಲಿ ನಡೆಯುತ್ತಿದೆ. ಡಾ. ಡ್ರೇ ಅವರನ್ನು "ರಿಕಾರ್ಡಿಂಗ್" ವಿಶೇಷಜ್ಞರಾಗಿ ಗುರುತಿಸಿ ಈ ಗೌರವವನ್ನು ನೀಡುತ್ತಿದ್ದಾರೆ. ಕೇವಲ ಮೂರು ವರುಷಗಳ ಹಿಂದೆ ಡಾ. ಡ್ರೇ ಅವರಿಗೆ ಎರಡು ವಾರಗಳ ಸಮಯದಲ್ಲಿ ಮೂರು ಬಾರಿ ಸ್ಟ್ರೋಕ್ ಆಗಿತ್ತಂತೆ. ಅಂತಹ ಆಘಾತದಿಂದ ಚೇತರಿಸಿಕೊಂಡು ಇಂದು ಈ ಗೌರವವನ್ನು ಪಡೆದುಕೊಳ್ಳುತ್ತಿರುವುದು ಬಹಳ ಸಂತೋಷದ ವಿಷಯ. 

ಮೂರು ದಿನಗಳ ಹಿಂದೆ ಇದೇ ಹಾಲಿವುಡ್ ಬುಲ್ವಾರ್ಡ್ನನಲ್ಲಿರುವ "ಪ್ಯಾಂಟೇಜ್ಸ್ " ಥೀಯೇಟರ್ ಕಲಾಕೇಂದ್ರದಲ್ಲಿ ಪ್ರಸಿದ್ಧ ಸಂಗೀತ ರೂಪಕ (ಮ್ಯೂಸಿಕಲ್) "ಷಿಕಾಗೋ" ನೋಡುವ ಸಂದರ್ಭದಲ್ಲಿ ಈ ವಾಕ್ ಆಫ್ ಫೇಮ್ ಮೇಲೆ ನಡೆದು ಹೋಗಬೇಕಾಯಿತು. ಆ ಸಂದರ್ಭದಲ್ಲಿ ನಮ್ಮ ಮಧ್ಯೆ ಇದ್ದು ಸಾಹಿತ್ಯ-ಸಂಗೀತ-ನಾಟಕ ರಂಗಗಳಲ್ಲಿ ಸೇವೆ ಮಾಡಿದ ಮಹನೀಯರ ನೆನಪುಗಳು ತಲೆಯಲ್ಲಿ ತೇಲಿದಾಗ ಬಂದ ಹೆಸರುಗಳಲ್ಲಿ ಡಾ. ವಸಂತ ಕವಲಿ ಅವರದೂ ಒಂದು.
 
*****

ಅರವತ್ತು-ಎಪ್ಪತ್ತರ ದಶಕದಲ್ಲಿ ಟೆಲಿವಿಷನ್ ಕೇಳರಿಯದ್ದು. ಜನಗಳಿಗೆ ಮನರಂಜನೆ ಬೇಕಾದರೆ ಯಾವುದಾದರೂ ಸಭಾಂಗಣಕ್ಕೆ ಹೋಗಿ ಸಂಗೀತ ಅಥವಾ ನಾಟಕವನ್ನೋ, ಅಥವಾ ಚಲನಚಿತ್ರವನ್ನೋ ನೋಡಬೇಕಾಗಿತ್ತು. ಮನೆಯಲ್ಲಿಯೇ ಸುಲಭವಾಗಿ ಹೊತ್ತು ಕಳೆಯಬೇಕು, ಮತ್ತೆ ಹಾಗೇ ಸ್ವಲ್ಪ ಮನರಂಜನೆಯೂ ಬೇಕು ಎಂದರೆ ಸಿಗುತ್ತಿದ್ದುದು ಆಕಾಶವಾಣಿ ಕಾರ್ಯಕ್ರಮಗಳು ಮಾತ್ರ. ಟ್ರಾನ್ಸಿಸ್ಟರುಗಳು ಸುಲಭ ಬೆಲೆಯಲ್ಲಿ ಸಿಗುವಂತಾದಾಗ ಆಕಾಶವಾಣಿಯ ಕಾರ್ಯಕ್ರಮಗಳು ಎಲ್ಲೆಂದರಲ್ಲಿ ಕೇಳುವಂತಾದವು. ಪ್ರತಿ ಭಾನುವಾರ ಬೆಳಗ್ಗೆ ಮುಂದಿನವಾರ ಪ್ರಸಾರವಾಗಲಿರುವ ಕಾರ್ಯಕ್ರಮಗಳ ತುಣುಕುಗಳು "ಪಕ್ಷಿನೋಟ" ಎನ್ನುವ ಶೀರ್ಷಿಕೆಯಲ್ಲಿ ಪ್ರಸಾರ ಆಗುತ್ತಿದ್ದವು. ರೇಡಿಯೋ ಆಲಿಸುವ ಆಸಕ್ತರು ಕಾಯುತ್ತಿದ್ದುದು ಚಲನಚಿತ್ರದ ಧ್ವನಿಸುರಳಿ ಮತ್ತು ಡಾ. ವಸಂತ ಕವಲಿ ಅವರ ನಾಟಕ ಪ್ರಸಾರಕ್ಕಾಗಿ. ಕವಲಿಯವರ ನೇತೃತ್ವದ ನಾಟಕಗಳೆಂದರೆ ಸದಭಿರುಚಿಯ ಸಾಹಿತ್ಯಕ ಪ್ರಸಾರ ಖಾತರಿ. 

ಕನ್ನಡ, ಇಂಗ್ಲಿಷ್, ಸಂಸ್ಕೃತ, ಮತ್ತು ಮರಾಠಿ ಭಾಷೆಗಲ್ಲಿ ಆಳವಾದ ಪಾಂಡಿತ್ಯ, ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ಕ್ರಮವಾಗಿ ಹಿರಿಯ ವಿದ್ವಾಂಸರುಗಳಿಂದ ಕಲಿತ ಸಂಗೀತ ಸಂಪತ್ತು, ಕರ್ನಾಟಕ ಸಂಗೀತದಲ್ಲಿ ಸ್ವಯಂ ಕೃಷಿ, ಅಂದಿನ ಈ ಎಲ್ಲ ಭಾಷೆಗಳ ಹಿರಿಯ ಸಾಹಿತಿಗಳ ಒಡನಾಟ, ಹಿರಿಯ ಮತ್ತು ಕಿರಿಯ ಕಲಾವಿದರಿಂದ ಕಸರತ್ತು ಮಾಡಿಸುವ ಕೌಶಲ್ಯ, ತನ್ನದೇ ಗರಡಿಯಲ್ಲಿ ಪಳಗಿಸಿ ತಯಾರು ಮಾಡಿದ ಶಿಷ್ಯ ಸಂಕುಲ, ಆಕಾಶವಾಣಿಯ ಸಹೋದ್ಯೋಗಿಗಳ ಸಹಕಾರ, ಇವೆಲ್ಲವುಗಳ ಪರಿಪಾಕದಿಂದ ಕವಲಿಯವರ ಆಕಾಶವಾಣಿ ಧ್ವನಿ ಪ್ರಸಾರವಾಗಲೀ, ರಂಗದ ಮೇಲೆ ತಂದ ನಾಟಕಗಳಾಗಲೀ, ಶ್ರೋತೃ-ಪ್ರೇಕ್ಷರಿಗೆ ರಸದೂಟ. ಕೇವಲ ಕಿವಿಯಲ್ಲಿ ಕೇಳಿದ ಹಿರಿಯ ಕವಿಗಳ ಕೃತಿಗಳ ಭಾಗಗಳನ್ನು ಹೆಚ್ಚು ಶ್ರಮವಿಲ್ಲದೆ ಸ್ವಲ್ಪ ಕಾಲದಲ್ಲಿಯೇ ಅನುಭವಿಸುವ ಸೌಕರ್ಯ ಅವರ ಪ್ರಯತ್ನಗಳಿಂದ ಇತರರಿಗೆ ಸಿಗುತ್ತಿತ್ತು. 
*****

ಈಗಿನ ಹಾವೇರಿ ಜಿಲ್ಲೆಯ ಬ್ಯಾಡಗಿ ವಸಂತ ಕವಲಿಯವರ ಸ್ಥಳ. ಪಂಡಿತರ ಮನೆತನದಲ್ಲಿ ಜನನ. ತಂದೆ ಪಂಡಿತ ಚನ್ನಬಸಪ್ಪ ಎಲ್ಲಪ್ಪ ಕವಲಿಯವರು ದೊಡ್ಡ ವಿದ್ವಾಂಸರು. ಆಗಿನ ಸಮಯದಲ್ಲಿ ದಡ್ಡರನ್ನು "ಪಂಡಿತ ಪುತ್ರ" ಎಂದೋ  "ರಜಕಾಶ್ವ" (ಅಗಸನ ಕುದುರೆ ಅಥವಾ ಕತ್ತೆ) ಎಂದೋ ಹಾಸ್ಯ ಮಾಡುತ್ತಿದು ಉಂಟು. ವಸಂತ ಕವಲಿಯವರ ವಿಷಯದಲ್ಲಿ ಹಾಗಿರಲಿಲ್ಲ. ಪರ್ವತವಾಣಿ ನರಸಿಂಗ ರಾವ್ ಹಾಸ್ಯಕ್ಕೆ ವಸಂತ ಕವಲಿ ಅವರು "ಪಂಡಿತ ಪುತ್ರ" ಅಲ್ಲ, "ಪುತ್ರ ಪಂಡಿತ" ಎಂದು ಹೇಳುತ್ತಿದ್ದರು. ವಿದ್ಯಾಭ್ಯಾಸ ಕಾಲದಲ್ಲಿಯೇ ಅಸಾಧಾರಣ ಪ್ರತಿಭೆ ತೋರಿದವರು ವಸಂತ ಕವಲಿಯವರು. ಹೆಚ್ಚಿನ ವಿದ್ಯಾಭ್ಯಾಸವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದರು. ಇಂಗ್ಲಿಷ್ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ ಎಂ. ಎ. ಪದವಿ ಪಡೆದರು. "ದುರಂತ ನಾಟಕಗಳು" ಎನ್ನುವ ವಿಷಯ ಕುರಿತಾದ ಪ್ರಬಂಧವನ್ನು ಮಂಡಿಸಿ ಪಿ.ಎಚ್ ಡಿ ಪಡೆದು ಡಾ. ವಸಂತ ಕವಲಿ ಆದರು. 

ಪಂಡಿತ ರಾಮರಾವ್ ನಾಯಕ್ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತರು. ಸ್ವಲ್ಪ ಕಾಲ ಪಂಡಿತ ಮಲ್ಲಿಕಾರ್ಜುನ ಮನ್ಸೂರ ಅವರಲ್ಲಿಯೂ ಕಲಿತರಂತೆ. ಮುಂಬೈನ ಕಾಲೇಜೊಂದರಲ್ಲಿ ಲೆಕ್ಚರರ್ ಕೆಲಸ ಸ್ವಲ್ಪ ಕಾಲ ಮಾಡಿದರಂತೆ. ಆ ಸಮಯದಲ್ಲಿ ಆದ ಅನೇಕ ಹಿರಿಯ ಮರಾಠಿ ಸಾಹಿತಿಗಳ ಪರಿಚಯ ಕವಲಿಯವರ ಮುಂದಿನ ಕೆಲಸಗಳಿಗೆ ಪೂರಕವಾಯಿತು. ಮುಂಬೈನಲ್ಲಿ "ಮಧ್ಯಮ ವ್ಯಾಯೋಗ" ಸಂಸ್ಕೃತ ನಾಟಕದ ರಂಗ ಪ್ರಯೋಗ ಮಾಡಿದ್ದರಂತೆ. ಹೀಗೆ ಸಾಹಿತ್ಯ-ಸಂಗೀತಗಳ ಸಂಗಮದ ಸಿರಿಯೊಂದಿಗೆ ಬೆಂಗಳೂರಿಗೆ ಬಂದರು. ಆಕಾಶವಾಣಿಯಲ್ಲಿ ಉದ್ಯೋಗ ಹಿಡಿದು ನಿಂತರು. ನಾಟಕ ವಿಭಾಗದ "ಪ್ರೊಡ್ಯೂಸರ್" ಆದರು. 

ವಸಂತ ಕವಲಿಯವರಿಗೆ ಸಂಶೋಧನೆ, ತೌಲನಿಕ ಅಧ್ಯಯನದಲ್ಲಿ ಆಪಾರ ಒಲವು. ಹಳಗನ್ನಡ, ಹೊಸಗನ್ನಡ ಎರಡರಲ್ಲೂ ಸಲೀಸಾದ ಓಡಾಟ. ಎಂತಹ ವಿದ್ವಾಂಸರನ್ನೂ ಅಲ್ಲಾಡಿಸುವ ಸಾಹಿತ್ಯ ಕೃಷಿ. ಆಗಲೇ ಲಭ್ಯವಿದ್ದ ಸಾಹಿತ್ಯ ಕೃತಿಗಳನ್ನು ನಾಟಕೀಕರಿಸಿ ರಂಗದ ಮೇಲೆ ತಂದರು. ಧ್ವನಿ ನಾಟಕಗಳಾಗಿ ಆಕಾಶವಾಣಿಯಲ್ಲಿ ಪ್ರಸಾರ ಮಾಡಿದರು. ಸ್ವತಃ ನಟರೂ ನಾಟಕಕಾರರೂ ಆದ ಪರ್ವತವಾಣಿ ನರಸಿಂಗ ರಾವ್, ಸಿ. ಕೆ. ನಾಗರಾಜ ರಾವ್ ಅವರಂಥವರ ಜೊತೆಗೆ ಆಗ ಪ್ರಚಲಿತವಿದ್ದ ನಟರನ್ನೂ ಸೇರಿಸಿ, ತಾವು ತಯಾರು ಮಾಡಿದ ಯುವ ಕಲಾವಿದರ ದಂಡನ್ನೂ ಕೂಡಿಸಿ, ತಮ್ಮ ಪಾಂಡಿತ್ಯದ ಕಾರಂಜಿಯ ಸೊಬಗನ್ನು ಎಲ್ಲರಿಗೆ ನೀಡಿದರು. 

ರಾಗ-ರಂಗ, ಕರ್ನಾಟಕ ಪರಂಪರೆ, ಗಂಗಾ-ಕಾವೇರಿ, ಕವಿ ಕಂಡ ಕರ್ನಾಟಕ, ಸರಸಮ್ಮನ ಸಮಾಧಿ (ಮಹಾಸತಿ ಸರಸ್ವತಿ), ತಮ್ಮದೇ ಆದ ರಚನೆ "ಕಣ್ವಕೇಶನ್", ಮುಂತಾದ ಅನೇಕ ರಂಗ ಪ್ರಯೋಗಗಳನ್ನು ಮಾಡಿದರು.  ಭಾಸ ಮಹಾಕವಿಯ "ಸ್ವಪ್ನ ವಾಸವದತ್ತ" ಅವರ ಕೈಯಲ್ಲಿ "ಕನಸಿನ ರಾಣಿ" ಆದಳು. ಆಕಾಶವಾಣಿಯ ಕಾರ್ಯ ಬಾಹುಳ್ಯದಿಂದ ಸಂಗೀತ ಕಚೇರಿಗಳನ್ನು ಮಾಡಲು ಹೆಚ್ಚು ಅವಕಾಶವಿಲ್ಲದಿದ್ದರೂ, ಮಿತ್ರರ ಕೂಟಗಳಲ್ಲಿ ಹಾಡಿದರು. ಅನೇಕರಿಗೆ ಸಂಗೀತವನ್ನೂ ಕಲಿಸಿದರು. ಅವರ ಸಂಗೀತ ಸೇವೆಯನ್ನು ಕೆಲವರು ಈಗಲೂ ನೆನೆಸುತ್ತಾರೆ. 

ಇವೆಲ್ಲವುಗಳ ಮಧ್ಯ ಸ್ವಂತ ಸಾಹಿತ್ಯ ರಚನೆಯನ್ನೂ ಮಾಡಿದರು. "ರಾಗ-ತಾನ-ಸೇನ" ಎಂದು ಯುರೋಪ್ ಪ್ರವಾಸ ಕಥನ ಬರೆದರು. ಕಣ್ವಕೇಶನ್, ಅಲಂಕಾರ, ಘನ ಆನಂದ, ಮತ್ತನೇಕ ಪುಸ್ತಕಗಳನ್ನು ಬರೆದರು. ಇಂಗ್ಲಿಷ್ನಲ್ಲಿ ತಾನ್ ಸೇನ್ ಎಂದು ಪುಸ್ತಕ ಬರೆದರು, ಅವರು ಏನು ಮಾಡಿದರೂ ಅಚ್ಚುಕಟ್ಟು; ಸಮಯದ ಮೇಲೆ ಗಮನ, ಶಿಸ್ತು ಎದ್ದು ಕಾಣುತ್ತಿತ್ತು. ಬ್ಯಾಡಗಿಯವರಾದರೂ ಎಲ್ಲರಿಗೂ ಉದ್ದಕ್ಕೂ ಸಕ್ಕರೆಯನ್ನೇ ಹಂಚಿದರು. ಅವರು ಮೆಣಸಿನಕಾಯಿ ಆಗುತ್ತಿದ್ದುದು "ರಿಹರ್ಸಲ್" ವೇಳೆಯಲ್ಲಿ ಮಾತ್ರ. ಅವರ ನಾಟಕದ ರಿಹರ್ಸಲ್ ಕಾಲಕ್ಕೆ ಬಸ್ಸುಗಳು ಸಕಾಲಕ್ಕೆ ಬರುತ್ತಿದ್ದವು. ಆಟೋದವರು ಆಕಾಶವಾಣಿ ಕಡೆಗೆ ಕರೆದ ತಕ್ಷಣ ಬರುತ್ತಿದ್ದರು. ಏಕೆಂದರೆ ಯಾವ ಕಲಾವಿದರೂ ಬಸ್ಸುಬರಲಿಲ್ಲ ಅಥವಾ ಆಟೋ ಸಿಕ್ಕಲಿಲ್ಲ ಎಂದು ಹೇಳಲಿಲ್ಲ!  

1987ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ಜಾನಪದ ಸಂಗೀತ ಸಮ್ಮೇಳನದಲ್ಲಿ "ಜಾನಪದ ಸಂಗೀತ - ಶಾಸ್ತ್ರೀಯ ಸಂಬಂಧ" ಎನ್ನುವ ವಿಷಯದ ಮೇಲೆ ಪ್ರಾತ್ಯಕ್ಷಿಕೆ ನೀಡಿದರು. ಅವರು ಸ್ವತಃ ಆಕಾಶವಾಣಿ ನಾಟಕಗಳಲ್ಲಿ ಧ್ವನಿ ಕೊಡುತ್ತಿರಲಿಲ್ಲ. ಆದರೆ ಕೆಲವು ನಾಟಕಗಳಲ್ಲಿ ರಂಗದ ಮೇಲೆ ಅಭಿನಯಿಸುತ್ತಿದ್ದರು. ಅವರ "ಕಣ್ವಕೇಶನ್" ನಾಟಕದ ದುಷ್ಯಂತನ ಪಾತ್ರ ನೋಡಿದ್ದ ನೆನಪು. ಮಹರ್ಷಿ ಕಣ್ವರ ಗುರುಕುಲದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲು ಬಂದ ಚಕ್ರವರ್ತಿ ದುಷ್ಯಂತನ ಮುಂದೆ ಪದವಿ ಪಡೆಯಲು ಬಂದ ಗರ್ಭಿಣಿ ಶಕುಂತಲೆಯ ಸನ್ನಿವೇಶ! ಹಾಸ್ಯದ ಹೊನಲು. 

ಖ್ಯಾತ ಮರಾಠಿ ಸಾಹಿತಿ ಪು. ಲ. ದೇಶಪಾಂಡೆ ಅವರ ಸಹಯೋಗದಲ್ಲಿ "ಮರಾಠಿ ನಾಟ್ಯಗೀತೆ - ಕನ್ನಡ ರಂಗಗೀತೆ" ಎನ್ನುವ ಕಾರ್ಯಕ್ರಮ ಮುಂಬಯಿಯ ಗಿರ್ಗಾಮ್ "ಸಾಹಿತ್ಯ ಸಂಘ ಮಂದಿರ"ದಲ್ಲಿ ಅನೇಕ ಹಿರಿಯ ಮರಾಠಿ ಮತ್ತು ಕನ್ನಡ ವಿದ್ವಾಂಸರ ಸಹಕಾರದಿಂದ ನಡೆಸಿದರು. ಆಗಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರಿಂದ ಸಹಕಾರ ಪಡೆದು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಹೆಗಡೆಯವರು ಪೂರ್ತಿ ಕಾರ್ಯಕ್ರಮ ನೋಡಿ, ವಿನೂತನ ಪ್ರಯತ್ನಕ್ಕೆ  ಸಂತೋಷ ಪಟ್ಟರು. 

ಭದ್ರಾವತಿ ಆಕಾಶವಾಣಿ ನಿಲಯದ ನಿರ್ದೇಶಕರಾಗಿ ಬಡ್ತಿ ಪಡೆದು ಅಲ್ಲಿ ಸೇವೆ ಸಲ್ಲಿಸಿದರು, ಕಡೆಯ ಎರಡು-ಮೂರು ವರ್ಷಗಳು ಅವರಿಗೆ ಕಿಡ್ನಿ ಸಮಸ್ಯೆಯಿಂದ ಬಹಳ ತೊಂದರೆ ಅನುಭವಿಸಬೇಕಾಯಿತು. ಅಕ್ಟೋಬರ್ 31, 1988ರಂದು ಸೇವಾನಿವೃತ್ತಿ ಪಡೆದರು. ಕೆಲವೇ ದಿನದ ನಂತರ ಕಿಡ್ನಿ ಸಮಸ್ಯೆ ಉಲ್ಬಣವಾಗಿ ಭದ್ರಾವತಿಯಿಂದ ಬೆಂಗಳೂರಿಗೆ ಹೆಚ್ಚಿನ ವೈದ್ಯಕೀಯ ನೆರವಿಗಾಗಿ ಕರೆತರುತ್ತಿದ್ದಾಗ 17ನೇ ನವೆಂಬರ್, 1988 ರಂದು ತಿಪಟೂರಿನ ಬಳಿ ನಿಧನರಾದರು. ಇಪ್ಪತ್ತು ವರ್ಷ ಸೇವೆ ಸಲ್ಲಿಸಿ ನಲವತ್ತು ವರುಷ ಪಿಂಚಣಿ ಪಡೆಯುವ ಜನರ ಮಧ್ಯೆ, ಮೂವತ್ತು ವರುಷ ಸೇವೆ ಸಲ್ಲಿಸಿ ಒಂದು ತಿಂಗಳೂ ಪಿಂಚಣಿ ಪಡೆಯದಾದರು. 

ಅವರ ಜೀವನ ಯಾತ್ರೆ ಕೊನೆಯಾದಾಗ ಅವರಿಗೆ ಕೇವಲ 56 ವರ್ಷ ವಯಸ್ಸು. ಸೇವಾನಿವೃತ್ತಿಯ ನಂತರ ಮಾಡಬೇಕಾದ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರು. ಅವೆಲ್ಲ ಹಾಗೆಯೇ ಉಳಿಯಿತು. 

******
 

ಖ್ಯಾತ ಶಿಲಾಶಾಸನ (ಎಪಿಗ್ರಾಫಿಸ್ಟ್ ) ಮತ್ತು ಇತಿಹಾಸ ತಜ್ಞೆ ಡಾ. ವಸುಂಧರಾ ಕವಲಿ-ಫಿಯೋಜಟ್ ವಸಂತ ಕವಲಿಯವರ ತಂಗಿ. ಅವರ ಫ್ರೆಂಚ್ ಪತಿ ಪಿಯಾ ಸೆಲ್ವ ಫಿಯೋಜಟ್ ( Dr Pierre Sylvan Filliozat) ಪ್ರಸಿದ್ಧ ಸಂಸ್ಕೃತ ವಿದ್ವಾಂಸರು. ದಂಪತಿಗಳಿಬ್ಬರೂ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರಗಳಿಂದ ವಿಶೇಷವಾಗಿ ಗೌರವಿಸಲ್ಪಟ್ಟವರು. ಅನೇಕ ಸಂಘ ಸಂಸ್ಥೆಗಳಿಂದ ಪ್ರತಿ ವರ್ಷ ಪ್ರಶಸ್ತಿಗಳನ್ನೂ ಗೌರವಗಳನ್ನೂ ಪಡೆಯುತ್ತಲೇ ಇರುವವರು. ಫಿಯೋಜಟ್ ಅವರಿಗೆ "ಮಹಾಮಹೋಪಾಧ್ಯಾಯ" ಎನ್ನುವ ಗೌರವವೂ ಸಂದಿದೆ. ಫ್ರಾನ್ಸ್ ದೇಶದಲ್ಲಿ ಪ್ರತಿ ವರುಷ "ಸಂಸ್ಕೃತ ದಿನ" ಆಚರಿಸುವುದು ಇವರದೊಂದು ಹೆಗ್ಗಳಿಕೆ. ಅಪಾರ ಗ್ರಂಥ ರಾಶಿಯನ್ನು ಈ ದಂಪತಿಗಳು ಸಾಹಿತ್ಯ ಜಗತ್ತಿಗೆ ನೀಡಿದ್ದಾರೆ. ವಿದ್ಯಾರಣ್ಯ ಪ್ರಶಸ್ತಿ, ಇತಿಹಾಸ ಸಂಸ್ಕೃತಶ್ರೀ, ಕರ್ನಾಟಕ ಕಲಾ ಪ್ರವರ್ತಕ ಮೊದಲಾದವು ಇವರಿಗೆ ಸಂದ ಕೆಲವು ಗೌರವಗಳು. 

ಹಂಪಿಯು "ವರ್ಲ್ಡ್ ಹೆರಿಟೇಜ್ ಸೆಂಟರ್" ಎಂದು 1986ರಲ್ಲಿ ಘೋಷಿತವಾಯಿತು. ಇದರಲ್ಲಿ ಡಾ. ವಸುಂಧರಾ ಅವರ ದೊಡ್ಡ ಕಾಣಿಕೆಯಿದೆ. ಕರ್ನಾಟಕದ, ದೇಶದ ಇತರ ಭಾಗಗಳಲ್ಲಿಯ ಅನೇಕ ಶಾಸನಗಳನ್ನು ಅಭ್ಯಸಿಸಿ "ವಿಜಯನಗರ ಸಾಮ್ರಾಜ್ಯ" ಅನ್ನುವುದು ಒಂದು ತಪ್ಪು ಕಲ್ಪನೆ; ಅದು ವಾಸ್ತವವಾಗಿ "ಕರ್ನಾಟಕ ಸಾಮ್ರಾಜ್ಯ" ಎಂದೇ ಇರಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸಿದವರು ಡಾ. ವಸುಂಧರಾ. ಅವರ ಅನೇಕ ವಿದ್ವತ್ಪೂರ್ಣ ಗ್ರಂಥಗಳು ಕರ್ನಾಟಕದ ಗತಿಸಿದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಅವರು ನೀಡಿರುವ ಕೊಡುಗೆಯನ್ನು ನಾವು ಕೃತಜ್ಞತೆಯಿಂದ ನೆನೆಯಬೇಕು. 
*****

ವಸಂತ ಕವಲಿಯವರ "ಕಣ್ವಕೇಶನ್" ನಾಟಕದ ರಿಹರ್ಸಲ್ ಕೆಲವು ದಿನ ಅವರ ಮನೆಯಲ್ಲಿಯೇ ನಡೆಯಿತು. ಅಂತಹ ಸಂದರ್ಭದಲ್ಲಿ ಒಂದು ದಿನ ಅವರ ಮನೆಗೆ ಭೇಟಿ ನೀಡಿ ಅವರ ರಿಹರ್ಸಲ್ ವ್ಯವಸ್ಥೆಯನ್ನು ನೋಡುವ ಸುಯೋಗ ನನಗೆ ಸಿಕ್ಕಿತ್ತು. ಆಗ ಅವರ ಮೇಜಿನ  ಮೇಲೆ ಇದ್ದ ಅವರ ಲೇಟರ್ ಹೆಡ್ ನೋಡಿದೆ. ಅದರಲ್ಲಿ ಅವರ ಹೆಸರು Dr. Wasant Kawli* ಎಂದಾಗಿತ್ತು! ಇದೇನಿದು, ಈ * ಗುರುತಿನ ಸೂಚನೆ ಎಂದು ಆಶ್ಚರ್ಯ ಆಯಿತು. ಉತ್ತರ ಲೆಟರ್ ಹೆಡ್ ಕೆಳಗೆ ಸಿಕ್ಕಿತು. *Please note the spelling in my name" ಎನ್ನುವುದು ಅದರ ಒಕ್ಕಣೆ! 

ಬ್ಯಾಂಕಿನ ಸಹೋದ್ಯೋಗಿಗಳು ಮತ್ತು ಮುಂದೆ ಬ್ಯಾಂಕ್ ಅಧಿಕಾರಿಗಳ ಉದ್ಯೋಗಕ್ಕೆ ಬರುವ ಪ್ರಶಿಕ್ಷಣಾರ್ಥಿಗಳಿಗೆ ಬ್ಯಾಂಕಿನ ರೆಕಾರ್ಡಗಳಲ್ಲಿ ಗ್ರಾಹಕರ ಸರಿಯಾದ ಹೆಸರು ನಮೂದಿಸುವ ಅವಶ್ಯಕತೆಯನ್ನು ತಿಳಿಸುವಾಗ ಅನೇಕ ಸಲ ಡಾ. ವಸಂತ ಕವಲಿ ಅವರ ಹೆಸರನ್ನು ಉಪಯೋಗಿಸಿ ಅವರನ್ನು ನೆನೆಸಿಕೊಂಡಿದ್ದೇನೆ. 

*****

ನಾಲ್ಕು ದಿನ ಪ್ರಯತ್ನ ಪಟ್ಟರೂ ಡಾ. ವಸಂತ ಕವಲಿ ಅವರ ಸರಿಯಾದ ಭಾವಚಿತ್ರ ಸಿಗಲಿಲ್ಲ. ಯಾರಾದರೂ ಸಹೃದಯರು ಕಳಿಸಿಕೊಟ್ಟರೆ ಕೃತಜ್ಞೆತೆಯಿಂದ ಸೇರಿಸುತ್ತೇನೆ. 

Monday, March 4, 2024

ಸಿನಿಮಾ ಮತ್ತು ಜೂಜಿನ ಹಾಡುಗಳಲ್ಲಿ ಹಾಸ್ಯ ಸಾಹಿತ್ಯ


ಸಾಹಿತ್ಯ ರಸಾಸ್ವಾದನೆಗೆ ದೊಡ್ಡ ದೊಡ್ಡ ಗ್ರಂಥಗಳನ್ನೇ ಹುಡುಕಿಕೊಂಡು ಹೋಗಬೇಕಾಗಿಲ್ಲ. ನಮ್ಮ ದಿನನಿತ್ಯದ ಬದುಕಿನಲ್ಲೇ ಅಲ್ಲಲ್ಲಿ ಸೊಗಸಾದ ಸಾಹಿತ್ಯವನ್ನು ಕಾಣಬಹದು. ಹತ್ತನೆಯ ಶತಮಾನದ ಬಹು ಖ್ಯಾತಿಯ ದಾರ್ಶನಿಕ ಆಚಾರ್ಯ ಅಭಿನವ ಗುಪ್ತನ ಗುರುಗಳೊಲ್ಲೊಬ್ಬನಾದ ಭಟ್ಟ ತೌತ (ಭಟ್ಟ  ತಾತ) ತನ್ನ "ಕಾವ್ಯ ಕೌತುಕ" ಗ್ರಂಥದಲ್ಲಿ "ಪ್ರತಿಭೆ" (Talent) ಎನ್ನುವ ಪದಕ್ಕೆ ಒಂದು ಸೊಗಸಾದ ಅರ್ಥ ಕೊಟ್ಟಿದ್ದಾನೆ. "ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ, ತದನುಪ್ರಾಣನಾಜೀವದ್ ವರ್ಣನಾ ನಿಪುಣಃ ಕವಿ" ಎಂದು ಪ್ರತಿಭೆಯನ್ನೂ ಕವಿಯನ್ನೂ ಜೋಡಿಸುತ್ತಾನೆ. ಪ್ರತಿಭೆ ಎಂದರೆ ಅನುಕರಣೆ ಅಲ್ಲ. ಹೊಸದನ್ನು ಮತ್ತೆ ಮತ್ತೆ ತಕ್ಷಣದಲ್ಲೇ ಹೊಸೆಯುವ ಸಾಮರ್ಥ್ಯಕ್ಕೆ "ಪ್ರತಿಭೆ" ಎಂದು ಹೆಸರು. ಅದರ ಆಧಾರದ ಮೇಲೆ ಕೃತಿ ರಚನೆ ಮಾಡಬಲ್ಲವನು ಕವಿ. ಇಂತಹ ಆ ಗಳಿಗೆಯಲ್ಲಿ ತಯಾರಿಸಿದ ವಸ್ತುವೇ ಒಂದು ರೀತಿಯ ಕವನ ಅಥವಾ ಕಾವ್ಯ. ಅಂದಮಾತ್ರಕ್ಕೆ ಬೇರೆ ರೀತಿಯ ಕೃತಿ ಕವನ ಅಥವಾ ಕಾವ್ಯ ಅಲ್ಲವೆಂದಲ್ಲ. ಒಟ್ಟಿನಲ್ಲಿ ಕಾವ್ಯ ಪ್ರತಿಭೆ ಕಾರಂಜಿಯಂತೆ ಮತ್ತೆ ಮತ್ತೆ ಪುಟಿದೇಳುತ್ತಿರಬೇಕೆನ್ನುವುದು ಮುಖ್ಯ. ಅದು ಎಂದೋ ಒಮ್ಮೆ ಬರುವದಲ್ಲ. ಕವಿಗೆ ಇಂತಹ ಕರ್ತೃತ್ವ ಶಕ್ತಿ ಸದಾಕಾಲವೂ ಇರಬೇಕು. 

ನಮ್ಮ ಸುತ್ತ ಇರುವ ಅನೇಕರಿಗೆ ಇಂತಹ ಪ್ರತಿಭೆ ಇರುವುದನ್ನು ನಾವು ಕಾಣುತ್ತೇವೆ. ಕೆಲವು ಸಾರ್ಥಕವಾಗುತ್ತವೆ. ಕೆಲವು ಅನ್ಯಾಯವಾಗಿ ಸೋರಿಹೋಗುತ್ತವೆ. ಅದೇ ಕ್ಷಣದಲ್ಲಿ ಹೊಸೆದ ಕೆಲವು ತಮಾಶೆಯಾದ ಕವನಗಳನ್ನು ನೋಡೋಣ. 

ಐವತ್ತು, ಅರವತ್ತು, ಎಪ್ಪತ್ತರ ದಶಕದಲ್ಲಿ ಸದಭಿರುಚಿಯ ಸಿನಿಮಾ ಚಿತ್ರಗಳು ಹೇರಳವಾಗಿ ಬರುತ್ತಿದ್ದವು. ಸಿನಿಮಾ ಮತ್ತು ನಾಟಕಗಳಿಗೆ ಕಥೆ, ಗೀತೆ ಮತ್ತು ಸಂಭಾಷಣೆ ಬರೆಯುತ್ತಿದ್ದವರು ಬಹುತೇಕ ಸಾಹಿತಿಗಳೂ, ವಿದ್ವಾಂಸರೂ ಆಗಿರುತ್ತಿದ್ದರು. ನಟರು ಮತ್ತು ನಿರ್ದೇಶಕರು ಸಾಹಿತ್ಯ-ಸಂಗೀತಗಳ ಉತ್ತಮ ಪರಿಚಯವುಳ್ಳ ಕಲಾವಿದರಾಗಿರುತ್ತಿದ್ದರು. ಈ ಕಾರಣದಿಂದ ಸಿನಿಮಾ ಗೀತೆಗಳು ಮತ್ತು ಸಂಭಾಷಣೆಗಳು ಉತ್ತಮ ದರ್ಜೆಯ ಸಾಹಿತ್ಯವೇ ಆಗಿರುತ್ತಿತ್ತು. ಇವುಗಳ ಬಗ್ಗೆ ಸಮಾಜದಲ್ಲಿ ಅತ್ಯಂತ ಗೌರವ ಇರುತ್ತಿತ್ತು. ಕೆಳಗೆ ಕೊಟ್ಟಿರುವ ಸಂದರ್ಭಗಳು ಕೇವಲ ಲಲಿತ ಹಾಸ್ಯ ತೋರಿಸುವ ಉದಾಹರಣೆಗಳೇ ಹೊರತು ನಾಟಕ ಮತ್ತು ಸಿನಿಮಾ ಸಾಹಿತ್ಯದ ವಿಶ್ಲೇಷಣೆ ಅಲ್ಲವೇ ಅಲ್ಲ. 

*****

ಅರವತ್ತು-ಎಪ್ಪತ್ತರ ದಶಕದ ಸಂಧಿಕಾಲ. ದೂರದ ಹಳ್ಳಿ ವಾಸಿ ದಂಪತಿಗಳು ತಮ್ಮ ಮಗನನ್ನು ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ವಿದ್ಯಾಪೀಠವೊಂದಕ್ಕೆ ಕರೆದು ತಂದು ಸೇರಿಸಿದರು. ಹತ್ತು ವಯಸ್ಸಿನ ಹುಡುಗ ಬಹಳ ಚೂಟಿಯಾಗಿದ್ದ. ಎರಡೇ ದಿನದಲ್ಲಿ ಗುರುಗಳ ಪ್ರೀತಿ ಸಂಪಾದಿಸಿದ. ಗುರುಕುಲವಾದ್ದರಿಂದ ಊಟ, ವಸತಿ ಅಲ್ಲಿಯೇ. ಬೆಳಗ್ಗೆ ಎಂಟರಿಂದ ಮಧ್ಯಾಹ್ನ ಹನ್ನೆರಡರವರೆಗೆ ಪಾಠ. ಹನ್ನೆರಡರಿಂದ ಎರಡು ಘಂಟೆಯವರೆಗೆ ಬಿಡುವು. ಆಗ ಮಧ್ಯಾಹ್ನ ಒಂದು ಗಂಟೆಗೆ ಎಲ್ಲರಿಗೂ ಸೊಗಸಾದ ಊಟ. ಮಧ್ಯಾಹ್ನ ಎರಡರಿಂದ ಸಂಜೆ ಐದು ಗಂಟೆಯವರೆಗೆ ಮತ್ತೆ ಪಾಠ. ನಂತರ ಬಿಡುವು. ರಾತ್ರಿ ಊಟದ ನಂತರ ಸ್ವಂತ ವಿದ್ಯಾಭ್ಯಾಸ. ಹೀಗಿತ್ತು ದಿನಚರಿ. 

ಬೆಳಗಿನ ಪಾಠದಲ್ಲಿ ಈ ವಿದ್ಯಾರ್ಥಿ ಎಲ್ಲರಿಗಿಂತ ಮುಂದು. ಚೆನ್ನಾಗಿ ಊಟ ಹೊಡೆಯುತ್ತಿದ್ದ ಸಹ. ಆದರೆ ಮಧ್ಯಾನ್ಹದ ಪಾಠದ ಸಮಯದಲ್ಲಿ ಆಗಾಗ ಕೆಲವು ದಿನ ಅವನ ಪತ್ತೆ ಇಲ್ಲ. ಊಟದ ನಂತರ ಎಲ್ಲಿ ಹೋಗುತ್ತಾನೆ ಎಂದು ಯಾರಿಗೂ ಗೊತ್ತಿಲ್ಲ. ಬರಬರುತ್ತ ಮಧ್ಯಾಹ್ನ ಅವನು ಪಾಠಕ್ಕೆ ಬರುವುದೇ ನಿಂತುಹೋಯಿತು. ಗುರುಗಳಿಗೆ ಮೊದಲು ಕಸಿವಿಸಿ. ನಂತರ ಬಹಳ ಕೋಪ ಬಂತು. ಒಂದು ದಿನ ಕೊಟ್ಟ ವಿಷಯದ ಮೇಲೆ ಕವನ ಕಟ್ಟುವ ರೀತಿಯ ಬಗ್ಗೆ ಬೆಳಿಗ್ಗೆ ಪಾಠವಾಯಿತು. ಮಧ್ಯಾನ್ಹದ ಪಾಠಕ್ಕೆ ಈ ಹುಡುಗ ಗೈರು. ಗುರುಗಳು ಕಾದಿದ್ದು ಅವನು ಸಂಜೆ ಗುರುಕುಲಕ್ಕೆ ಬಂದಾಗ ಹಿಡಿದರು. "ಎಲ್ಲಿ ಹೋಗಿದ್ದೆಯೋ, ಭಡವ!" ಎಂದು ಜಬರಿಸಿ ಕೇಳಿದರು. ಮೊದಲು ಹುಡುಗ ಏನೂ ಹೇಳಲಿಲ್ಲ. ಬಲವಂತ ಮಾಡಿದಾಗ ಹೇಳಿದ:

ಗರಗರನೆ ತಿರುಗಿ ಹಿಮಗಿರಿಗೆ ಎರಗಿ 
ಉಮೆಯನ್ನು ಕಂಡು ಬಂದೆ
ಸ್ವಪ್ನದಲಿ ಊರ್ವಶಿ ಮೇನಕೆಯ ನರ್ತನವ 
ಕಂಡು ಆನಂದ ನಂದ ಎಂದೆ

ನಟರಾಜನಿಗೆ ಸಂಪಿಗೆಯ ಗೀತಾಂಜಲಿಯ 
ಕೊಟ್ಟು ಸಂತೋಷದಿಂದ ಬಂದೆ 
ಶಿವಾಜಿ ಕಂಡ ಭಾರತದ ಕಲ್ಪನೆಯ ನೋಡಿ 
ಸಾಗರದಿ ಮಿಂದೆ ಎಂದೆ  

ಪ್ರಭಾತದಲಿ ಲಕ್ಷ್ಮಿಯನು ಕಂಡು ಜೈಕಾರ ಹಾಕಿ 
ಕಪಾಲೀಶ್ವರನ ದರುಶನವ ಮಾಡಿ 
ಅಲಂಕಾರ ಸಂಗಮದ ಸೊಗಸನ್ನು ಕಂಡು 
ಕೆಂಪಗಿಲ್ಲಿ ಬಂದು ನಿಂತೆ!

ಹುಡುಗನಿಗೆ ಚಿಕ್ಕ ವಯಸ್ಸು. ಸಿನಿಮಾ ನೋಡುವ ಹುಚ್ಚು. ಮಧ್ಯಾನ್ಹ ಊಟದ ನಂತರ ಪಾಠಕ್ಕೆ ಚಕ್ಕರ್ ಹಾಕಿ ಮ್ಯಾಟಿನಿ ಶೋ ನೋಡಲು ಹೋಗುತ್ತಿದ್ದ. ಗುರುಗಳು ಕೇಳಿದಾಗ ಬೆಳಗಿನ ಪಾಠದ ಪ್ರಭಾವದಿಂದ ಸಿನಿಮಾ ಮಂದಿರಗಳ ಹೆಸರಿನಲ್ಲೇ ಕವಿತೆ ಮಾಡಿದ!

ಹಿಮಾಲಯ (ಹಿಮಗಿರಿ), ಉಮ, ಸಪ್ನಾ, ಊರ್ವಶಿ, ಮೇನಕಾ, ನರ್ತಕಿ, ಆನಂದ, ನಂದಾ, ನಟರಾಜ, ಸಂಪಿಗೆ, ಗೀತಾಂಜಲಿ, ಸಂತೋಷ್, ಶಿವಾಜಿ, ಭಾರತ್, ಕಲ್ಪನ, ಸಾಗರ್, ಪ್ರಭಾತ್, ಲಕ್ಷ್ಮಿ, ಜೈಹಿಂದ್ (ಅಥವಾ ಜಯಶ್ರೀ), ಕಪಾಲಿ, ಅಲಂಕಾರ್, ಸಂಗಮ್, ಇವು ಆಗ ಇದ್ದ ಕೆಲವು ಚಿತ್ರಮಂದಿರಗಳ ಹೆಸರುಗಳು.  ಕೆಲವು ಈಗ ಇಲ್ಲ. ಮೊದಲಲ್ಲಿ "ಹಿಮಗಿರಿಗೆ ಎರಗಿ ಉಮೆಯನ್ನು ಕಂಡು ಬಂದೆ" ಎಂದಾಗ ಎರಡು ಚಿತ್ರಮಂದಿರದ ಜೊತೆಗೆ ಹಿಮವಂತನ ಮಗಳು ಪಾರ್ವತೀ (ಉಮಾ) ಎನ್ನುವ ಧ್ವನಿ. ಕೊನೆಯಲ್ಲಿ "ಕೆಂಪಗಿಲ್ಲಿ ಬಂದು ನಿಂತೆ" ಅನ್ನುವುದು ಕೆಂಪೇಗೌಡ ಚಿತ್ರಮಂದಿರವೂ ಆಗಬಹುದು; ಅಥವಾ ಬಿಸಿಲಲ್ಲಿ ಅಲೆದು ಮುಖ ಕೆಂಪಗಾಯಿತು ಎಂದೂ ಇರಬಹುದು!  

ಗುರುಗಳು ಕಷ್ಟಪಟ್ಟು ಅವನು ಪಾಠ ತಪ್ಪಿಸಿ ಸಿನಿಮಾ ನೋಡುವುದನ್ನು ಬಿಡಿಸಿದರಂತೆ! ಮುಂದೆ ಅವನ ಪ್ರತಿಭೆ ವಿದ್ಯಾಭಾಸದ ಕಡೆ ಪೂರ್ತಿ ತಿರುಗಿ ಹೆಸರಾಂತ ವಿದ್ವಾಂಸ ಆದನಂತೆ.  

*****

ಮಾನ್ವಿ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಒಂದು ಪಟ್ಟಣ. ಹರಿದಾಸ ಪಂಥದ ಶ್ರೇಷ್ಠ ದಾಸರಾದ ಜಗನ್ನಾಥ ದಾಸರ ಸ್ಥಳ. ಈಗಲೂ ಹರಿದಾಸ ಪಂಥದ ಅನೇಕರು ಅಲ್ಲಿ ವಾಸವಾಗಿದ್ದಾರೆ. ನಿಷ್ಠರಾದ ಕೆಲವು ಮಿತ್ರರಿಗೆ ಇಸ್ಪೀಟ್ ಆಡುವ ಹುಚ್ಚು ಅಂಟಿಕೊಂಡಿತ್ತು. ಅತಿಯಾಗಿ ಕುಡಿದರೆ ಪಂಚಾಮೃತವೂ ಕೆಟ್ಟದೇ. ಅಂತಹದರಲ್ಲಿ ಜೂಜಿನ ವಿಷಯ ಹೇಳುವುದೇ ಬೇಡ. ಬಾಕಿಯಂತೆ ಒಳ್ಳೆಯವರೂ, ತಿಳಿದವರೂ ಆದರೂ ಇಸ್ಪೀಟಿನ ಎಲೆಯ ಆಟದ ಖಯಾಲಿ ಕಾರಣ ಸ್ನೇಹಿತರು ಪ್ರತಿದಿನ ಸೇರಿ ಆಟ ಆಡುವುದು. ಹಣ ಕಟ್ಟಿ ಆಡುವಾಗ ಕಳೆದುಕೊಳ್ಳುವುದೇ ಹೆಚ್ಚು.  

ಕೆಲವು ದಶಕಗಳ ಹಿಂದೆ ಅಲ್ಲಿ ವಾಸವಿದ್ದ ಇಸ್ಪೀಟ್ ಸ್ನೇಹಿತರು ಒಂದು ದಿನ ಆಡಲು ಶುರು ಮಾಡಿದರು. ಮಾನ್ವಿ ಗೋವಿಂದ ದಾಸರೆಂಬುವರು ಒಂದು ಆಟ ಸೋತರು. ಪಕ್ಕದಲ್ಲಿದ್ದವರು 'ದಾಸರೇ, ಆಟ ಸೋತಿರಲ್ಲ!" ಎಂದರು. "ಏನು ಮಾಡುವುದು? ರಾಣಿ ಕೈ ಕೊಟ್ಟಳು!" ಎಂದರು ಅವರು. ಇಸ್ಪೀಟ್ ರಾಣಿ ಎಲೆಗಾಗಿ ಕಾದಿದ್ದು, ಆ ಎಲೆ ಬರದೇ ಸೋತೆ ಎಂದರು. ಇದರ ಮೇಲೆ ಒಂದು ಹಾಡು ಮಾಡಿ ಎಂದರು ಮತ್ತೊಬ್ಬರು. ಮಾನ್ವಿ ಶಾಮಸುಂದರ ದಾಸರು ತಾಯಿ ಮಹಾಲಕ್ಷ್ಮಿಯನ್ನು ಸಂಬೋಧಿಸಿ ಒಂದು ಸೊಗಸಾದ ದೇವರನಾಮವನ್ನೇ ಮಾಡಿ ಹೀಗೆ ಹಾಡಿದರು:

ಜಾಣೆ ನಂಬಿದೆ ಇಸ್ಪೀಟ್ ರಾಣೀ ನೀ ಒಲಿದೆನ್ನ 
ಪಾಣಿಯೊಳಗೆ ಬಂದು ಕಾಣಿಸಮ್ಮ 
ವಾಣಿ ಶ್ರೀಲಕುಮೀಶ ರುದ್ರಾಣಿಯರಿಗಿಂತ 
ಕ್ಷೋಣಿಯೊಳಗೆ ಬಹು ಮಾನ್ವಿತೆ ನೀನಮ್ಮ 

ಜನಕನು ಗಳಿಸಿದ ಧನವೆಲ್ಲ ಕಳಕೊಂಡೆ 
ದನಕರು ಹೊಲ-ಮನೆಯನು ಮಾರಿದೆ 
ಜನರೊಳಗಪಹಾಸ್ಯಕ್ಕೊಳಗಾದೆ ಕೇಳಮ್ಮ 
ಮಡದಿ ಮಕ್ಕಳ ಕೈಗೆ ಕೊನೆಗೆ ಪರಕೆ ಕೊಟ್ಟೆ 

ಉಣಲು ಅನ್ನವ ಕಾಣೆ ಉಡಲು ವಸ್ತ್ರವ ಕಾಣೆ 
ಕಡುಕಷ್ಟ ಕಡಲೊಳು ಮುಳುಗಿದೆನಮ್ಮ 
ಪೊಡವಿಯೊಳ್ ನಿನ್ ಹೊರತು ಕಡೆಹಾಯಿಸುವಂಥ 
ಒಡೆಯರ ಕಾಣೆ ಕೈಪಿಡಿದು ರಕ್ಷಿಸಮ್ಮ 

ಎಷ್ಟಂತ ಹೇಳಲಿ ಮಡದಿಯ ಗೋಳಾಟ 
ತಾಳಿ ಹೊರತು ಎಲ್ಲ ಹಾಳಾಯಿತು 
ಸಾಲ ಬಹಳಾಯ್ತು ಜೋಳಿಗೆ ಬಂದಿತು 
ಕೂಳಿಗೆ ಮನೆಮನೆ ಚಾಲುವರಿದೆನಮ್ಮ 

ಅಕ್ಕರದಲ್ಲಿ ಎರಡೆಕ್ಕದೊಳಗೆ ಬಂದು 
ಫಕ್ಕನೆ ನೀ ಎನ್ನ ಕರದೊಳು ಬಾರಮ್ಮ 
ಮುಕ್ಕಣ್ಣ ಸಖ ತನ್ನ ಬೊಕ್ಕಸದೊಳಗಿನ 
ರೊಕ್ಕ ಹಾಕಲು ಅವನ ಲೆಕ್ಕಿಸೆ ನಾನಮ್ಮ 

ಕಾಮಿತದಾಯಿನಿ ಕಾಮಿನಿ ಶಿರೋಮಣಿ 
ಶಾಮಸುಂದರ ಸಾರ್ವಭೌಮನ ರಾಣಿ 
ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ 
ನಾ ಮೊರೆ ಹೊಕ್ಕೆನು ನೀ ದಯ ಮಾಡು ತಾಯೆ 

ಜೂಜಿನ ನಷ್ಟಕ್ಕೆ ಸಿಲುಕಿ ಮನೆ, ಹೊಲ, ಪಶು ಸಂಪತ್ತು, ಚಿನ್ನ-ಬೆಳ್ಳಿ ಎಲ್ಲ ಮಾರಿ ಕಳಕೊಂಡು, ಹೆಂಡತಿ ಮಕ್ಕಳ ಹೀನಾಯ ಸ್ಥಿತಿಗೆ ಕಾರಣನಾದೆ. ಸಾಲಗಾರನಾಗಿ ಮನೆ ಮನೆ ತಿರುಗಿ ಭಿಕ್ಷೆ ಬೇಡುವ ಸ್ಥಿತಿ ಬಂತು. ಹೀಗಿದೆ ನನ್ನ ಸ್ಥಿತಿ. ನನ್ನ ಕಾಪಾಡಲು ಯಾರಿಗೂ ಸಾಧ್ಯವಿಲ್ಲ. ನೀನೇ ನನಗೆ ಆಟದಲ್ಲಿ ಬೇಕಾದ ಎಲೆಯಾಗಿ ಬಂದು, ಕೈಯಲ್ಲಿ ಕುಳಿತು, ಗೆಲ್ಲಿಸಿ, ಈ ಕಷ್ಟಗಳಿಂದ ಪಾರು ಮಾಡು ಎಂದು ಮೊರೆ ಇಡುತ್ತಾರೆ. 

ಪ್ರಪಂಚದಲ್ಲಿ ಎಲ್ಲರಿಗಿಂತ ಶ್ರೀಮಂತ ಶಿವನ ಮಿತ್ರನಾದ ಕುಬೇರ. ಅವನೇ ಆಟಕ್ಕೆ ಬಂದು ತನ್ನ ಖಜಾನೆಯಲ್ಲಿ ಇರುವ ಎಲ್ಲ ಹಣವನ್ನೂ ಪಣಕ್ಕಿಡುತ್ತಾ ಹೋಗಲಿ. ನಿನ್ನ ಕರುಣೆ ಇದ್ದರೆ, ನೀನು ಬೇಕಾದ ಎಲೆಯಾಗಿ ನನ್ನ ಕಯ್ಯಲ್ಲಿ ಬಂದು ಕೂಡುತ್ತಿದ್ದರೆ, ನಾನು ಕುಬೇರನನ್ನೂ ಲೆಕ್ಕಿಸದೆ ಗೆಲ್ಲುತ್ತ ಹೋಗುತ್ತೇನೆ ಎನ್ನುತ್ತಾರೆ.!

ಕೊನೆಯ ನುಡಿಯಲ್ಲಿ ಅವರ ಮತದ ವಿಶೇಷ ಪ್ರಮೇಯ ಒಂದನ್ನು ಹೇಳುತ್ತಾರೆ. ಮಹಾಲಕ್ಷ್ಮಿ ಕೇಳಿದ್ದನ್ನು ಕೊಡುವ ಶಕ್ತಿಯುಳ್ಳ ಕಾಮಿತದಾಯಿನಿ. ಮೂರು ಲೋಕಗಲ್ಲಿಯೂ ಅತಿ ಶ್ರೇಷ್ಠ ಮಹಿಳೆ. ಶಾಮಸುಂದರನಾದ ಶ್ರೀ ಮಹಾವಿಷ್ಣುವಿನ ಮಹಾರಾಣಿ. ಹೀಗೆಂದು ಹೇಳಿದಮೇಲೆ ಅವಳನ್ನು ಶ್ರೀಮಂತ ಜೋಕರನ ಸೋದರಿ ಎಂದು ಸಂಬೋಧಿಸುತ್ತಾರೆ. ಲಕ್ಷ್ಮಿ ಹೇಗೆ ಸೋದರಿ ಆದಾಳು? 

ಮಹಾಲಕ್ಷ್ಮಿಗೆ ಶ್ರೀ, ಭೂ, ದುರ್ಗಾ ಎಂದು ಮೂರು ರೂಪಗಳು. ಶ್ರೀ ಕೃಷ್ಣ ಇಸ್ಪೀಟ್ ಆಟದ ಜೋಕರ್ ಇದ್ದಂತೆ. ಅವನು ಮಹಾಭಾರತದಲ್ಲಿ, ಭಾಗವತದಲ್ಲಿ ಮಾಡದಿದ್ದ ಕೆಲಸವೇ ಇಲ್ಲ. "ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದು ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿದ". ಪಾರ್ಥನಿಗೆ ಸಾರಥಿಯಾಗಿ "ಪಾರ್ಥಸಾರಥಿ" ಸಹ ಆದ. ರಾಜಸೂಯ ಯಾಗದಲ್ಲಿ ಎಲ್ಲ ಅತಿಥಿಗಳು ಊಟ ಮಾಡಿದ ಎಂಜಲು ಎಲೆಯನ್ನೂ ಎತ್ತಿದ. ಕಡೆಗೆ ಅದೇ ಯಾಗದಲ್ಲಿ ಆಗ್ರ ಪೂಜೆಯನ್ನೂ ಸ್ವೀಕರಿಸಿದ! ಆದ್ದರಿಂದ ಆಳಿನಿಂದ ಹಿಡಿದು ಅರಸನ ವರೆಗೆ ಎಲ್ಲ ಪಾತ್ರಗಳನ್ನೂ ನಿಭಾಯಿಸಿದ. ಇಸ್ಪೀಟ್ ಆಟದಲ್ಲಿ ಜೋಕರನೂ ಹಾಗೇ ಅಲ್ಲವೇ? ಅದರಿಂದ ಅವನು ಮಹಾಲಕ್ಷ್ಮಿಯ ಗಂಡನಾದ ಶ್ರೀಮಂತ ಜೋಕರ. ಮಹಾಲಕ್ಷ್ಮಿಯು ದುರ್ಗಾ ರೂಪದಿಂದ ದೇವಕಿಯ ಏಳನೇ ಗರ್ಭವನ್ನು ವಸುದೇವನ ಇನ್ನೊಬ್ಬ ಹೆಂಡತಿ ರೋಹಿಣಿಯಲ್ಲಿ ಸೇರಿಸಿ ತಾನೇ ದುರ್ಗಾ ರೂಪದಿಂದ ಕಂಸನಿಗೆ ಬೇಕೆಂದೇ ಸಿಕ್ಕಳು. ಆದರೆ ಅವನಿಗೆ ದಕ್ಕದೆ ತಪ್ಪಿಸಿಕೊಂಡಳು. ನಂತರ ಶ್ರೀಕೃಷ್ಣನ ಜನನವಾಯಿತು. ಆದ್ದರಿಂದ ಅವಳು ಕೃಷ್ಣನ ಪ್ರೇಮದ ಭಗಿನಿಯಾದಳು! ಇದನ್ನೇ ನಿರ್ದೇಶಿಸುತ್ತಾರೆ ಕೊನೆಯ ನುಡಿಯಲ್ಲಿ. 

ಈ ಹಾಡು ಯು ಟ್ಯೂಬಿನಲ್ಲಿ ಲಭ್ಯವಿದೆ. ಈ ಕೆಳಕಂಡ ಲಿಂಕ್ ನಲ್ಲಿ ಕೇಳಬಹುದು:

 https://www.youtube.com/watch?v=DcZCBS8L0fI

ಲಿಂಕ್ ಕಾಪಿ ಪೇಸ್ಟ್ ಮಾಡಿ ಕೇಳಿ ನೋಡಿ.

Tuesday, February 27, 2024

ಕೆರೆಯ ಪದ್ಮರಸನ "ದೀಕ್ಷಾಬೋಧೆ"


ವಿಶಾಲ ಕನ್ನಡ ಸಾಹಿತ್ಯ ಸಮುದ್ರಕ್ಕೆ ವಿಪುಲ ಸಾಹಿತ್ಯ ಜಲರಾಶಿಯನ್ನು ಕಾಣಿಕೆಯಾಗಿ ಕೊಟ್ಟ ಅನೇಕ ಮಹಾನದಿಗಲ್ಲಿ ಮೂರು ಪ್ರಮುಖವಾದ ಧಾರೆಗಳೆಂದರೆ ಜೈನ ಸಾಹಿತ್ಯ, ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ. ಮೂಲತಃ ಧಾರ್ಮಿಕ ಸ್ರೋತಗಳಿಂದ ಹುಟ್ಟಿದ ರಚನೆಗಳಾದರೂ ಇವುಗಳಲ್ಲಿ ಹೇರಳವಾದ ಕಾವ್ಯ ಸಂಪತ್ತು ಇರುವುದನ್ನು ನೋಡಬಹುದು. ಇವುಗಳಲ್ಲಿನ ಗ್ರಂಥಕರ್ತರು ತಮ್ಮ ತಮ್ಮ ಧಾರ್ಮಿಕ ಅಂಶಗಳನ್ನು ಪ್ರಸಾರ ಮಾಡುವುದಕ್ಕಾಗಿ ರಚನೆಗಳನ್ನು ಮಾಡಿದ್ದರೂ, ಅವರೆಲ್ಲ ತಮ್ಮ ಕ್ಷೇತ್ರಗಳಲ್ಲಿಯೂ ಮತ್ತು ಭಾಷಾಪ್ರಯೋಗದಲ್ಲಿಯೂ ಚತುರರು. ಅನೇಕರು ಮೇಲು ದರ್ಜೆಗೆ ಸೇರಿದ ವಿದ್ವಾಂಸರು. ಭಾಷೆ, ವ್ಯಾಕರಣ, ಅಲಂಕಾರ, ಛಂದಸ್ಸುಗಳಲ್ಲಿ ಪಳಗಿದವರು. ತಮ್ಮ ಧರ್ಮ ಪ್ರಸಾರದ ಜೊತೆ ಜೊತೆಯಲ್ಲಿ ಕನ್ನಡ ಭಾಷೆಯ ವಿಸ್ತಾರ ಮತ್ತು ಬೆಳವಣಿಗೆಗೆ ಇಂಬು ಕೊಟ್ಟವರು. ನಮ್ಮ ಭಾಷೆಯ ಮೇಲೆ ಈಗಿನ ಸನ್ನಿವೇಶದಲ್ಲಿ ನಡೆಯುತ್ತಿರುವ ಆಘಾತಕಾರಿ ಬೆಳವಣಿಗೆಗಳಲ್ಲಿ, ಅನೇಕ ಶತಮಾನಗಳು ಕಳೆದರೂ ಮಾಸದ ಅವರ ಕೊಡುಗೆಯನ್ನು ಕನ್ನಡಿಗರು ಅತ್ಯಂತ ಗೌರವದಿಂದ ನೆನೆಯಬೇಕಾದ ಸಮಯವಿದು.

"ಕರಡಿಗೆಯಿಂದ ಬಂದ ಕರಡಿ" ಸಂಚಿಕೆಯಲ್ಲಿ ಗುರುಗಳಿಂದ "ಲಿಂಗದೀಕ್ಷೆ" ಪಡೆದ ಶಿಷ್ಯನು "ಇಷ್ಟಲಿಂಗ" ಪಡೆದು ಕರಡಿಗೆಯಲ್ಲಿ ಧರಿಸುವ ಬಗ್ಗೆ ಸಂಕ್ಷಿಪ್ತ ಚರ್ಚೆ ನೋಡಿದೆವು. ಈ ರೀತಿಯ ದೀಕ್ಷೆ ಕೊಡುವ ವೇಳೆಯಲ್ಲಿ ಗುರುವು ಶಿಷ್ಯನಿಗೆ ಅವನ ಆಧ್ಯಾತ್ಮಿಕ ಉನ್ನತಿಗಾಗಿ ದಾರಿ ದೀವಿಗೆಯಾಗಿ ನೀಡುವ ಉಪದೇಶವೇ "ದೀಕ್ಷಾಬೋಧೆ". ಹೊಯ್ಸಳ ಧೊರೆ ನರಸಿಂಹ ಬಲ್ಲಾಳನ ಮಂತ್ರಿಯಾಗಿದ್ದ ಕೆರೆಯ ಪದ್ಮರಸ ಈ ಸಂಬಂಧವಾಗಿ "ದೀಕ್ಷಾಬೋಧೆ" ಎಂಬ ಗ್ರಂಥವನ್ನು ಸರಳ ರಗಳೆಯಲ್ಲಿ ರಚಿಸಿದ್ದಾನೆ. ಶರಣ ಸಾಹಿತ್ಯದಲ್ಲಿ ಈ ಗ್ರಂಥಕ್ಕೆ ಉನ್ನತ ಸ್ಥಾನವಿದೆ. ಈ ಗ್ರಂಥ ಕರ್ತೃ, ಗ್ರಂಥ ರಚನೆಯ ಸಂದರ್ಭ ಮತ್ತು ಗ್ರಂಥ ವಿಶೇಷ ಇವುಗಳ ಬಗ್ಗೆ ಸ್ವಲ್ಪ ದೃಷ್ಟಿ ಹಾಯಿಸೋಣ. 

***** 

ಹನ್ನೆರಡನೇ ಶತಮಾನದ ಕೊನೆಯ ಸಮಯದಲ್ಲಿ (ಸುಮಾರು 1190 AD) ನಡೆದ "ಕಲ್ಯಾಣ ಕ್ರಾಂತಿ"  ಸಂದರ್ಭದಲ್ಲಿ ಭಕ್ತಿ ಭಂಡಾರಿ ಬಸವಣ್ಣ ಅವರ ಪ್ರಭಾವಕ್ಕೆ ಒಳಗಾಗಿ ಅನೇಕರು ಅವರ ಅನುಯಾಯಿಗಳಾದರು. ಇಂತಹವರಲ್ಲಿ ಸಮಾಜದ ಎಲ್ಲ ಸ್ತರಗಳ ಜನ ಸಮುದಾಯಕ್ಕೆ ಸೇರಿದವರೂ ಇದ್ದರು. ಜನ ಸಾಮಾನ್ಯರಿಂದ ಹಿಡಿದು ಪಂಡಿತರು ಮತ್ತು ಆಳುವ ವರ್ಗದ ಅಧಿಕಾರಿಗಳೂ, ಅರಸರೂ ಸೇರಿದ್ದರು. ಇಂತಹವರಲ್ಲಿ ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಹಿರಿಯರಾದ ಶಿವಯೋಗಿ ಮಲ್ಲರಸ ಸಹ ಒಬ್ಬರು. ಇವರನ್ನು ಕೆಲವೆಡೆ ಶಿವಯೋಗಿ ಮಲ್ಲಿಕಾರ್ಜುನ ಎಂದೂ ಕರೆದಿದ್ದಾರೆ. ಕಲ್ಕುರ್ಕಿ ಎನ್ನುವ ಸಂಸ್ಥಾನದ ಅರಸು ಮನೆತನಕ್ಕೆ ಸೇರಿದವರು ಶಿವಯೋಗಿ ಮಲ್ಲರಸರು. ಇವರ ಮಗನೇ ವಚನಕಾರರಾದ ಸಕಳೇಶ ಮಾದರಸ. ಸಕಳೇಶ ಮಾದರಸರು ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಸ್ವಲ್ಪ ಹಿರಿಯರು. ರಾಜ್ಯಆಡಳಿತದ ನಡುವೆ ಶಿವನಿಗೆ ಆರಾಧನೆಯ ಜೊತೆಗೆ ಸಂಗೀತ ಸೇವೆ ಅರ್ಪಿಸುವ ಕಾಯಕ ನಡೆಸುತ್ತಿದ್ದರು. ವೀಣೆ ಮೊದಲಾದ ತಂತಿ ವಾದ್ಯಗಳ ನುಡಿಸುವಿಕೆಯಲ್ಲಿ ಕುಶಲಿಗಳು. ಅನುಭವ ಮಂಟಪದ ಹಿರಿಯ ಸದಸ್ಯರಾದ ಇವರ 133 ವಚನಗಳು ಸಿಕ್ಕಿವೆ. ಸಕಳೇಶ್ವರ ಅಥವಾ ಸಕಳೇಶ್ವರ ದೇವಾ ಎನ್ನುವುದು ಅವರ ವಚನಗಳ ಅಂಕಿತ ಪದ. ಅವರ ಒಂದು ವಚನ ಹೀಗಿದೆ: 

ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ ಬಳಿಕ 
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಆಲಸ್ಯವಿಲ್ಲದೆ 
ಭಯಭಕ್ತಿಯಿಂದ ಮಾಡೋದು ಭಕ್ತರಿಗೆ ಲಕ್ಷಣ. 
ಇಂತಲ್ಲದೆ ಲಿಂಗಾರ್ಚನೆಯ ಬಿಟ್ಟು, ಕಾಯದಿಚ್ಛೆಗೆ ಹರಿದು 
ಅದ್ವೈತದಿಂದ ಉದರವ ಹೊರೆದೊಡೆ 
ಭವಭವದಲ್ಲಿ ನರಕ ತಪ್ಪದಯ್ಯಾ, ಸಕಳೇಶ್ವರಾ 

ಮೇಲಿನ ವಚನದಲ್ಲಿ "ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ" ಎನ್ನುವುದು ಗುರುವಿನಿಂದ ಪಡೆಯುವ "ಲಿಂಗ ದೀಕ್ಷೆ"ಯನ್ನು ಸೂಚಿಸುತ್ತದೆ. ಕಾಲಕ್ರಮದಲ್ಲಿ ಸಕಳೇಶ ಮಾದರಸರು ಕಲ್ಯಾಣವನ್ನು ಬಿಟ್ಟು ದಕ್ಷಿಣಕ್ಕೆ ಬಂದರು. ನಂತರ ಎಲ್ಲ ಐಹಿಕ ಹೊಣೆಯನ್ನೂ ತಮ್ಮ ಮಗನಾದ ಮಾಯಿದೇವರಸನಿಗೆ ವಹಿಸಿ ಲಿಂಗೈಕ್ಯರಾದರು. ಮಾಯಿದೇವರಸನ ಪತ್ನಿಯ ಹೆಸರು ಮಂಗಳಾದೇವಿ. ಈ ಮಾಯಿದೇವರಸ-ಮಂಗಳಾದೇವಿ ದಂಪತಿಗಳ ಮಗನೇ ಪದ್ಮರಸ. ಪದ್ಮರಸನು ಪ್ರಾಯಕ್ಕೆ ಬರುವ ವೇಳೆಗೆ ಕಲ್ಯಾಣದ ಕ್ರಾಂತಿಯಾಗಿ ಸುಮಾರು ಅರವತ್ತು ವರುಷಗಳು. 

ಪದ್ಮರಸನು ತನ್ನ ವಂಶದ ಹಿರಿಯರಂತೆ ಘನ ಪಂಡಿತನು. ಪದ್ಮರಸನ ಸೋದರಮಾವ ಗೌರಪದ ನಾಯಕ ದೋರಸಮುದ್ರದ ಹೊಯ್ಸಳ ವಂಶದ ಅರಸು ನರಸಿಂಹ ಬಲ್ಲಾಳನ ಮಂತ್ರಿಯಾಗಿದ್ದನು. ತನ್ನ ಮಗಳು ಮಹಾದೇವಿಯನ್ನು ಪದ್ಮರಸನಿಗೆ ಕೊಟ್ಟು ವಿವಾಹ ಮಾಡಿ ದೋರಸಮುದ್ರದಲ್ಲಿಯೇ ಇರಿಸಿಕೊಂಡನು. ಪದ್ಮರಸನ ಪಾಂಡಿತ್ಯ ಮತ್ತು ಆಡಳಿತ ಚತುರತೆಯನ್ನು ಮೆಚ್ಚಿದ ನರಸಿಂಹ ಬಲ್ಲಾಳ ಗೌರಪದನಾಯಕನ ಮರಣಾನಂತರ ಪದ್ಮರಸನನ್ನು ಮಂತ್ರಿಯಾಗಿ ನೇಮಿಸಿದನು. ವೇಲಾಪುರಿಯ ಬಳಿ (ಈಗಿನ ಬೇಲೂರು) "ಬಿಟ್ಟಿ ಸಮುದ್ರ" ಎಂಬ ವಿಶಾಲ ಕೆರೆಯನ್ನು ಕಟ್ಟಿಸಿದ ಕಾರಣ ಪದ್ಮರಸನಿಗೆ "ಕೆರೆಯ ಪದ್ಮರಸ" ಎಂದು ಹೆಸರು ಬಂದು ಪ್ರಖ್ಯಾತನಾದನು. 

*****

ಪ್ರತಿ ಪಂಥದವರೂ ತಮ್ಮ ತಮ್ಮ ಮತ ಪ್ರಚಾರಕ್ಕಾಗಿ ದೇಶ ಸಂಚಾರ ಮಾಡಿ, ಪರ ಮತದವರನ್ನು ವಾದಕ್ಕೆ ಕರೆದು, ಅವರನ್ನು ಸೋಲಿಸಿ ತಮ್ಮ ಮತವನ್ನು ಸ್ಥಾಪಿಸುವ ಪದ್ಧತಿ ನಮ್ಮ ದೇಶದಲ್ಲಿ ಅನೇಕ ಶತಮಾನಗಳಿಂದ ಬಂದಿದೆ. ಇಂತಹ ವಾದದಲ್ಲಿ ಸೋತವರು ತಮ್ಮ ಎಲ್ಲ ಬಿರುದು-ಬಾವಲಿಗಳನ್ನು ಗೆದ್ದವರಿಗೆ ಒಪ್ಪಿಸಿ ಅವರ ಶಿಷ್ಯರಾಗಿ ಗೆದ್ದವರ ಮತವನ್ನು ಸ್ವೀಕರಿಸುವುದೂ ನಡೆದು ಬಂದಿದೆ. "ತ್ರಿಭುವನ ತಾತ" ಎಂದು ಪ್ರಸಿದ್ಧನಾದ ಆಂಧ್ರದ ವೈಷ್ಣವ ವಿದ್ವಾಂಸನು ದೋರಸಮುದ್ರಕ್ಕೆ ಬಂದು ಅಲ್ಲಿನ ಪಂಡಿತರನ್ನು ವಾದಕ್ಕೆ ಕರೆದನು. ಹಿರಿಯನಾಗಿದ್ದ ಪದ್ಮರಸನು ತನ್ನ ಮಗನಾದ ಕುಮಾರ ಪದ್ಮರಸನನ್ನು ತ್ರಿಭುವನ ತಾತನ ಎದುರು ವಾದಕ್ಕೆ ನಿಲ್ಲಿಸಿದನು. ಕುಮಾರ ಪದ್ಮರಸನು ವಾದದಲ್ಲಿ ತ್ರಿಭುವನ ತಾತನನ್ನು ಸೋಲಿಸಿ ಜಯಶಾಲಿಯಾದನು. ಒಪ್ಪಂದದಂತೆ ತ್ರಿಭುವನ ತಾತನು ಕೆರೆಯ ಪದ್ಮರಸನ ಶಿಷ್ಯನಾಗಿ ಲಿಂಗದೀಕ್ಷೆ ಪಡೆದನು. 

ತ್ರಿಭುವನ ತಾತನು ದೀಕ್ಷೆ ಪಡೆಯುವ ವೇಳೆಯಲ್ಲಿ ಪದ್ಮರಸನು ವಿವರಿಸಿದ ತತ್ವ-ರಹಸ್ಯಗಳನ್ನು ವಿವರವಾಗಿ ಎಲ್ಲರಿಗೂ ತಿಳಿಯುವಂತೆ ವ್ಯವಸ್ಥೆ ಮಾಡಬೇಕೆಂದು ತನ್ನ ಗುರುವನ್ನು ಕೇಳಿಕೊಂಡನು. ಪದ್ಮರಸನು ಈ ವಿವರಗಳನ್ನೇ ರಗಳೆಯ ರೂಪದಲ್ಲಿ ವಿವರಿಸಿ "ದೀಕ್ಷಾಬೋಧೆ" ಎನ್ನುವ ಗ್ರಂಥವನ್ನು ರಚಿಸಿದನು. ಅದು ಕನ್ನಡದ ಹೆಮ್ಮೆಯ ಕವಿಗಳಾದ ಹರಿಹರ ಮತ್ತು ಅವನ ಸೋದರಳಿಯನಾದ ರಾಘವಾಂಕ ಅವರ ಕೃತಿಗಳು ರಚಿತವಾಗಿ ಪ್ರಚಲಿತವಾಗಿದ್ದ ಕಾಲ.  ಹರಿಹರನಾದರೋ ರಗಳೆಯ ಕವಿ ಎಂದೇ ಪ್ರಖ್ಯಾತನಾದವನು. ಪದ್ಮರಸನು ತನ್ನ ಕೃತಿಗೆ ರಗಳೆಯನ್ನು ಆರಿಸಿಕೊಂಡದ್ದು ಈ ಕಾಲಘಟ್ಟದಲ್ಲಿ ಸಮಂಜಸವೇ ಆಗಿದೆ. (ಕೆಲವರು "ಏನೋ ನಿನ್ನ ರಗಳೆ!" ಎಂದು ಹೇಳುವ ಪ್ರಯೋಗ ಇದರಿಂದಲೇ ಬಂದಿದೆ). 

*****

ದೀಕ್ಷಾಬೋಧೆಯ ವಿಷಯ ಲಿಂಗದೀಕ್ಷೆ ಕೊಡುವ ಕಾಲದಲ್ಲಿ ಗುರುವು ಶಿಷ್ಯನಿಗೆ ನೀಡುವ ಬೋಧನೆಯ ವಿವರಗಳೇ. ಜೀವನು ಮೂಲತಃ ಶಿವ ಸ್ವರೂಪಿಯೇ. ಆದರೆ, ಆಣವ ಮಲ, ಕಾರ್ಮಿಕ ಮಲ ಮತ್ತು ಮಾಯಾ ಮಲ ಎಂಬ (ಮೂರು ಕೊಳೆಗಳೆಂಬ) ಕಶ್ಮಲಗಳಿಂದ ಸಂಕುಚಿತಗೊಳ್ಳುತ್ತಾನೆ. ಶಿವನ ಸರ್ವ ಪರಿಪೂರ್ಣತ್ವ, ಸರ್ವಜ್ಞತ್ವ, ಮತ್ತು ಸರ್ವ ಕರ್ತೃತ್ವ ಎನ್ನುವ ಗುಣಗಳನ್ನು ಮರೆತವನಾಗಿ ಸಂಸಾರದಲ್ಲಿ ಸಿಲುಕುತ್ತಾನೆ. ಗುರುವಿನಿಂದ ದೀಕ್ಷೆ ಪಡೆದು ಮಲತ್ರಯ ನಿವೃತ್ತಿಯಾಗಿ (ಮೇಲೆ ಹೇಳಿದ ಮೂರು ಕೊಳೆಗಳನ್ನು ತೊಳೆದು ಶುದ್ಧನಾಗಿ) ಮೇಧಾ-ಮಂತ್ರ-ಕ್ರಿಯಾ ದೀಕ್ಷೆ ಪಡೆದು,ತನುತ್ರಯದಲ್ಲಿ ಲಿಂಗತ್ರಯಗಳ ಸಂಬಂಧ ಅರಿಯುತ್ತಾನೆ. 

ದೀಕ್ಷಾಬೋಧೆ ಗ್ರಂಥವು ದೀಕ್ಷೆಯ ಪೂರ್ವದಲ್ಲಿ ತಿಳಿಸುವ ಸದಾಚಾರ ವಿವರಣೆ, ದೀಕ್ಷೆಯ ಸಮಯದಲ್ಲಿ ಮಾಡುವ ಉಪದೇಶ (ಬೋಧನೆ), ಮತ್ತು ದೀಕ್ಷೆಯ ನಂತರದ ಅರ್ಪಿತ ಪ್ರಸಾದಾದಿಗಳನ್ನು ಕುರಿತ ವಿವರಣೆ ಎಂಬ ಮೂರು ಭಾಗಗಳಲ್ಲಿದೆ ಎಂದು ಹೇಳಬಹುದು. ಆಸಕ್ತರು ಹೆಚ್ಚಿನ ವಿವರಗಳಿಗೆ ಮೈಸೂರು ವಿಶ್ವವಿದ್ಯಾನಿಲಯ ಸಂಪಾದಿಸಿ ಪ್ರಕಟಿಸಿರುವ ಪುಸ್ತಕವನ್ನು ನೋಡಬಹುದು. 

*****

ಭಾರತೀಯ ಜ್ಞಾನಪೀಠ ಸ್ಥಾಪಿಸಿದ "ಮೂರ್ತಿದೇವಿ ಪ್ರಶಸ್ತಿ" ಮೊದಲ ವರ್ಷದಲ್ಲೇ ಕನ್ನಡಕ್ಕೆ ತಂದುಕೊಟ್ಟ ಖ್ಯಾತಿ ಕನ್ನಡದ ಹೆಸರಾಂತ ಲೇಖಕ ಸಿ. ಕೆ. ನಾಗರಾಜ ರಾವ್ ಅವರದು. ಅವರ "ಪಟ್ಟಮಹಾದೇವಿ ಶಾಂತಲದೇವಿ" ಎರಡು ಸಾವಿರ ಪುಟಗಳಿಗೂ ಮೀರಿದ ಬೃಹತ್ ಕಾದಂಬರಿ. "ವೀರಗಂಗ ವಿಷ್ಣುವರ್ಧನ" ಮತ್ತು "ದಾಯಾದ ದಾವಾನಳ?" ಈ ಕೃತಿಯ ಮುಂದುವರೆದ ಭಾಗಗಳು. ಹೊಯ್ಸಳರ ಕಾಲದ ಇತಿಹಾಸವನ್ನು ಕಾದಂಬರಿಯ ರೂಪದಲ್ಲಿ ಈ ಕೃತಿಗಳಲ್ಲಿ ಓದಬಹುದು. ಕೆರೆಯ ಪದ್ಮರಸನ ಪ್ರಸ್ತಾಪ ಈ ಕಾದಂಬರಿಗಳಲ್ಲಿ ಅಲ್ಲಲ್ಲಿ ಬರುತ್ತದೆ. 

ಪಂಡಿತ ಕೆ. ಪಿ. ಶಿವಲಿಂಗಯ್ಯ ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದ ಪಂಡಿತರು. ಶರಣ ಸಾಹಿತ್ಯದಲ್ಲಿ ವಿಶೇಷ ಪರಿಶ್ರಮ ಹೊಂದಿದವರು. ಸುಮಾರು ನಲವತ್ತು ವರುಷಗಳ ಹಿಂದೆ ಮೇಲೆ ಹೇಳಿದ ಕಾದಂಬರಿಗಳ ಕುರಿತಾದ ಸಾಹಿತ್ಯ ಗೋಷ್ಠಿಯೊಂದರಲ್ಲಿ "ಕೆರೆಯ ಪದ್ಮರಸನ ದೀಕ್ಷಾಬೋಧೆ"ಎನ್ನುವ ವಿದ್ವತ್ಪೂರ್ಣ ಉಪನ್ಯಾಸ ಮಾಡಿದ್ದರು. ಅದನ್ನು ಕೇಳುವ ಸುಯೋಗ ನನಗೆ ಸಿಕ್ಕಿತ್ತು. ನಲವತ್ತು ವರುಷಗಳು ಕಳೆದಿದ್ದರೂ ಅವರು ನೀಡಿದ ಉಪನ್ಯಾಸ ಈಗಲೂ ನೆನೆಯುವಂತಹುದು. ಈ ಸಂದರ್ಭದಲ್ಲಿ ಅವರನ್ನು ಅತ್ಯಂತ ಕೃತಜ್ಞತೆಯಿಂದ ನೆನೆಯುತ್ತೇನೆ

Monday, February 26, 2024

Ancient View On Types Of Plants


Our present education system leans heavily on the western resources and delivery methods. In many fields, the contents of various subjects start with the foundations of imported thoughts and research. Our own oriental knowledge takes a back seat or even totally disappears in the teaching and learning pictures. While discussing Mahakavi Kalidasa in our classrooms, professors often state that Kalidasa is a great poet and he can be called as "Shakespeare of India", despite the fact that Kalidasa lived and created his works over a thousand years before Shakespeare. One cannot even imagine a professor in England referring to Shakespeare as "Kalidasa of England".

There is a vast treasure of knowledge in our ancient texts and literature on any field of learning. Unfortunately, most of our valuable texts were lost during the invasion of parts of our country by foreign forces. It is said that the library in some of our ancient universities were torched by the invaders and burnt for days together, reducing their resources to ashes. Large valuable literature was lost when the people having them were forced to flee their places due to fear of losing lives. The abolition of Gurukul System and introduction of Macaulay System of education led to the belief that all learning should start with what is given to us by the west. 

In spite of the loss of very valuable resources for the above reasons, whatever is left with us today is itself sufficient to indicate the extent of knowledge available in them. 

***** 

Let us take the example about classification of plants to compare what we have learnt in our education system and knowledge available in our ancient literature.

We learnt in our Science or Botany classes about different types of plants. We were taught that the plant kingdom can be classified into five basic types: Herbs, Shrubs, Trees, Climbers and Creepers.
  • Herbs are short-sized plants. Their stems are soft, delicate and can be easily bent. They have a short life cycle and usually live for one or two years. They have few branches or do not have branches. 
  • Shrubs are medium-sized plants. They grow taller than herbs but shorter than trees. They have hard and woody stems with branches. The stems can be bent easily and have relatively longer life span than herbs. 
  • Trees are longest living plant types and grow tall with many branches, with some exceptions like coconut and palm trees which have no branches. They have strong trunks and provide valuable wood for many uses like making furniture and used in building constructions.
  • Climbers have thin, long and weak stems which cannot stand upright on their own. But they can grow vertically with external support and bear their own weight.
  • Creepers are plants that stay on the ground, spread out and grow. They have thin, long and very fragile stems and cannot bear their own weight.

*****

Discussion about plants can be seen in many ancient texts. Texts on Ayurveda deal extensively with the plant kingdom, various types of plants and their uses as medicine. 

A clear classification of plant types can be seen in "Shat Pashnopanishad", popularly referred as Pashnopanishad. Six scholars from different parts of the country have amassed knowledge during their own studies, but have some unanswered questions. They embark on a journey to find a Guru who can satisfactorily answer their questions. They all get one answer as the person who can answer their questions. They are told by various sources that Bhagwan Pippalada is the right person to answer their questions. They converge and approach Bhagwan Pippalada for advising them on their questions. Interestingly the grouping of questions relate to evolution and formation of the Universe, creation of non-living items around us, creation of plant and animals, and working of the human body in connection with both material world or physical functions as well as spiritual advancement. 

While explaining the evolution of the Plant World, Bhagwan Pippalada has classified the plant world into these six types: Oshadi, Vanaspati, Lataa, Druma, Virudha, Twaksara. Their features are exhaustively explained and can be summarised as under:
  • Oshadi (ओषधिः): These are plants that die after delivering their next generation. Examples are Paddy, Ragi, Wheat, Banana etc. The interesting thing about this classification is that the life of plant ends with the birth of next generation!
  • Vanaspati (वनस्पति): These are plants and trees that give out fruits without flowering. Usually flowering precedes fruit bearing. But in the case of Vanaspati, the plants give fruits directly without flowering. Example is Pippala or Bodhi or Peepul tree or Sacred Fig (Aswatha).
  • Lataa (लता): These are creepers and is the same as creepers referred above. They cannot stand erect on their own but can grow upwards with support of others like trees, pillars etc. 
  • Druma (द्रुम): These are plants or trees that first flower and then give fruits. There are many such trees with best examples being Mango, Jackfruit etc. Most of the fruit yeilding trees are in this category.
  • Virudha (विरुधः): This is same as Shrubs mentioned above. They grow up to three or four feet, have many branches with soft stems and can be easily bent.
  • Twaksaara (त्वक् सार): These are plants which have their strength only in the outer shell, but do not have anything inside them. Best example is the Bamboo family. Twak means skin. Saara means essence. Inside portion is hallow and the strength of the plant is in its outer shell or skin. 
Twaksaara and Vanaspati mentioned above are interesting classifications and match with reality around us. Though most of the fruit bearing trees first flower and then give fruits, there are a very few exceptions and they are grouped here. The classification of herbs, shrubs , creepers, climbers and trees are all included in the above six groups.

A detailed study of Pashnopanishad further makes subtle difference between plants, animals and man. In case of plants, consumed food moves upwards where as in the case of man it moves downwards. It also specifies that plants also have feelings and respond well to favourable atmosphere. The order of creation also is detailed here. 

There are many more interesting explanation here about creation of the external universe as well as internal systems of human beings, and other processes like consumption and digestion of food, growth process from mothers womb onwards, sleep and dreams, thinking process etc.

****
A detailed and systematic study is required about the various branches of knowledge in our Vedic literature and modren scientific findings. 

Saturday, February 17, 2024

ಒಬ್ಬರ ಹಿಂದೆ ಮತ್ತೊಬ್ಬರು!


ಕಡು ಬಡವನೊಬ್ಬ ಕಾಶಿಯಾತ್ರೆ ಮಾಡಬೇಕೆಂದು ಆಸೆ ಪಟ್ಟ. ಅವನಿದ್ದ ಸ್ಥಳಕ್ಕೆ ಕಾಶಿ ಬಹಳ ದೂರದ ಪಟ್ಟಣ. ಅವನ ಬಳಿ ಹಣವಿಲ್ಲ. ಇದ್ದುದು ಕೇವಲ ಎರಡೇ ಎರಡು ಆಸ್ತಿ. ಎರಡು ಹಳೆಯ ಪಂಚೆಗಳು ಮತ್ತು ಒಂದು ಹಳೆಯ ತಾಮ್ರದ ತಂಬಿಗೆ. ಈ ಆಸ್ತಿಯ ಜೊತೆಗೆ ಇದ್ದುದು ಕಾಶಿ ವಿಶ್ವನಾಥನ ದರ್ಶನ ಮಾಡಬೇಕೆಂಬ ಉತ್ಕಟ ಇಚ್ಛೆ. ಸರಿ, ಕಾಶಿಗೆ ಹೋಗುವ ಸಾಧುಗಳ ಗುಂಪೊಂದು ಅವನ ಊರಿಗೆ ಬಂದಾಗ ಅವರ ಜೊತೆ ಸೇರಿಕೊಂಡ. ಹಾಗೂ ಹೀಗೂ ಕಾಶಿ ತಲುಪಿದ. 

ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ಅವನು. ಕಾಶಿಯಂತಹ ದೊಡ್ಡ ಪಟ್ಟಣವನ್ನು ಹಿಂದೆಂದೂ ನೋಡಿರಲಿಲ್ಲ. ಕಾಶಿ ತಲುಪಿ ಗಂಗಾ ನದಿಯನ್ನು ನೋಡಿದಾಗ ಬಹಳ ಸಂತೋಷ ಆಯಿತು. ಕಾಶಿ ಸೇರಿದಾಗ ಸೂರ್ಯಾಸ್ತದ ಸಮಯ. ಸಾಧುಗಳ ಜೊತೆ ಗಂಗಾ ತೀರದಲ್ಲಿ ಕುಳಿತಿದ್ದ. ಯಾರೋ ಕೆಲವರು ಬುಟ್ಟಿಯಲ್ಲಿ ರೊಟ್ಟಿಗಳನ್ನೂ ಪಲ್ಯವನ್ನೂ ತಂದು ಅಲ್ಲಿದ್ದ ಎಲ್ಲ ಸಾಧುಗಳಿಗೂ ಕೊಟ್ಟರು. ಇವನಿಗೂ ಸಿಕ್ಕಿತು. ರೊಟ್ಟಿ, ಪಲ್ಯ ತಿಂದು ಹೊಟ್ಟೆ ತುಂಬಾ ಗಂಗೆಯ ನೀರು ಕುಡಿದ. ಯಾವುದೋ ಧರ್ಮಶಾಲೆಯ ಜಗುಲಿಯ ಮೇಲೆ ಸ್ವಲ್ಪ ಜಾಗ ಸಿಕ್ಕಿತು. ಒಂದು ಪಂಚೆ ಉಟ್ಟಿದ್ದ. ಇನ್ನೊಂದನ್ನು ಹೊಡೆದ. ತಂಬಿಗೆಯನ್ನೇ ತಲೆದಿಂಬು ಮಾಡಿ ಮಲಗಿದ. ಪ್ರಯಾಣದ ಆಯಾಸದಿಂದ ಸೊಗಸಾದ ನಿದ್ರೆ ಬಂದಿತು. 

ಬೆಳಗ್ಗೆ ಇನ್ನೂ ನಿದ್ರೆಯಲ್ಲಿ ಇದ್ದಾಗ ಸುತ್ತ ತುಂಬಾ ಶಬ್ದ ಕೇಳಿಸಿತು. ಎಲ್ಲರೂ ಗುಸುಗುಟ್ಟುತ್ತಿದ್ದರು. ಕೆಲವರು ಅಳುತ್ತಿದ್ದರು. ಮತ್ತೆ ಕೆಲವರು ಅಳುತ್ತಿದ್ದವರಿಗೆ ಸಮಾಧಾನ ಮಾಡುತ್ತಿದ್ದರು. ವಿಷಯ ಏನೆಂದು ಅವನಿಗೆ ಸ್ವಲ್ಪ ಸಮಯದ ನಂತರ ತಿಳಿಯಿತು. ಎಲ್ಲರೂ ಮಲಗಿದ್ದಾಗ ಮಧ್ಯ ರಾತ್ರಿ ಕಳ್ಳರು ಕೈಗೆ ಸಿಕ್ಕಿದ ಪದಾರ್ಥಗಳನ್ನು ಕದ್ದು ಒಯ್ದಿದ್ದರು. ಕೆಲವರ ಹಣವೆಲ್ಲ ಹೋಗಿತ್ತು. ಕೆಲವರ ಬಟ್ಟೆಬರೆ ನಾಪತ್ತೆ. ಮತ್ತೆ ಕೆಲವರ ಆಭರಣದ ಗಂಟು ಕಾಣಿಸದು. ಏನೂ ಕಳೆಯದೆ ಇದ್ದಿದು ಇವನೊಬ್ಬನೇ. ಅಷ್ಟರಮಟ್ಟಿಗೆ ಅವನು ಬಡವನಾಗಿದ್ದುದೇ ಒಳ್ಳೆಯದಾಯಿತು ಅಂದುಕೊಂಡ. 

*****

ಸೂರ್ಯೋದಯವಾಯಿತು. ಎಲ್ಲರ ಜೊತೆ ಗಂಗಾಸ್ನಾನಕ್ಕೆ ಹೋರಟ. ಸ್ನಾನವಾಯಿತು. ಒಗೆದ ಪಂಚೆಯನ್ನು ಮರಳಿನ ಮೇಲೆ ಒಣಗಿಸಿಕೊಂಡ. ಅದನ್ನು ಉಟ್ಟು ಇನ್ನೊಂದನ್ನು ಒಗೆದ. ಈಗ ಅವನ ಉಳಿದ ಆಸ್ತಿ ಒದ್ದೆ ಪಂಚೆಯೊಂದು ಮತ್ತು ತಾಮ್ರದ ತಂಬಿಗೆಯೊಂದು. ತಂಬಿಗೆ ಜಜ್ಜಿ ಹೋಗಿದ್ದರೂ ಅದನ್ನೂ ಯಾರಾದರೂ ಕದ್ದಾರು ಎನ್ನುವ ಭಯ. ಏನು ಮಾಡುವುದು? ಯೋಚಿಸಿದ. ಒಂದು ಉಪಾಯ ಹೊಳೆಯಿತು. ಒದ್ದೆ ಪಂಚೆಯನ್ನು ಹೊದ್ದ. ಮರಳಿನಲ್ಲಿ ಒಂದು ಹೊಂಡ ಮಾಡಿದ. ತಂಬಿಗೆಯನ್ನು ಅದರಲ್ಲಿ ಹೂತ. ವಿಶ್ವನಾಥನ ದರ್ಶನ ಮಾಡಿ ಮರಳಿ ಬಂದು ಒಯ್ಯುವುದು ಎಂದು ತೀರ್ಮಾನಿಸಿದ. ಈಗ ಅದನ್ನು ಯಾರೂ ಕದಿಯಲಾರರು!  ತನ್ನ ಉಪಾಯಕ್ಕೆ ತಾನೇ ನಕ್ಕ. ಎರಡು ಹೆಜ್ಜೆ ದೇವಾಲಯದ ಕಡೆ ಇಟ್ಟ. 

ಅನುಮಾನ ಬಂತು. ಹಿಂದೆ ಬಂದಮೇಲೆ ಈ ವಿಶಾಲ ಮರಳಿನ ರಾಶಿಯಲ್ಲಿ ತನ್ನ ತಂಬಿಗೆ ಹೂತಿರುವ ಜಾಗ ಹುಡುಕುವುದು ಹೇಗೆ? ಹಿಂದೆ ಬಂದು ಆ ಸ್ಥಳದಲ್ಲಿ ಒಂದು ಸಣ್ಣ ಮರಳಿನ ಗುಡ್ಡೆ ಮಾಡಿದ. ಈಗ ಹುಡುಕುವುದು ಸುಲಭ ಎಂದುಕೊಂಡ. ಸ್ವಲ್ಪ ದೂರ ಹೋಗಿ ಹಿಂದೆ ನೋಡಿದ. ಮರಳ ಗುಡ್ಡೆ ಕಾಣಿಸಿತು. ತನ್ನ ಜಾಣ್ಮೆಗೆ ತಾನೇ ಮೆಚ್ಚಿಕೊಂಡ. ಸಂತೋಷ ಚಿತ್ತನಾಗಿ ವಿಶ್ವನಾಥನ ದರ್ಶನಕ್ಕಾಗಿ ಹೋರಟ.  

ದೇವಾಲಯದ ಜನಜಂಗುಳಿಯಲ್ಲಿ ಬಾಕಿ ಎಲ್ಲ ವಿಷಯ ಮರೆತು ಹೋಯಿತು. ವಿಶ್ವನಾಥನ ದಿವ್ಯ ದರ್ಶನವಾಯಿತು. ದೇವಾಲಯದ ಹೊರಗೆ ಬಂದು ಸ್ವಲ್ಪ ದೂರ ನಡೆದು ಯಾರದೋ ಮನೆಯ ಹೊರಗೆ ಕಟ್ಟೆಯ ಮೇಲೆ ಕುಳಿತ. ಯಾರೋ ನಾಲ್ಕು ಮಂದಿ ಬಂದು ರೊಟ್ಟಿ ಪಲ್ಯ ಕೊಟ್ಟರು. ಹೊಟ್ಟೆ ತುಂಬಿ ಆಯಾಸಕ್ಕೆ ಜೋಂಪು ಹತ್ತಿತು. ಕುಳಿತಲ್ಲೇ ನಿದ್ರಿಸಿದ. ಎಚ್ಚರರವಾದಾಗ ಸುಮಾರು ಸಂಜೆ ನಾಲ್ಕು ಗಂಟೆ. ತಂಬಿಗೆ ನೆನಪಾಯಿತು. ಧಡಧಡನೆ ಗಂಗಾ ನದಿಯ ಕಡೆ ಹೆಜ್ಜೆ ಹಾಕಿದ. 

*****

ತಾನು ತಂಬಿಗೆ ಹೂತಿಟ್ಟ ಘಟ್ಟಕ್ಕೆ ಬಂದು ನೋಡಿದ. ಕಂಡ ದೃಶ್ಯ ಅವನ ತಲೆ ತಿರುಗಿಸಿತು. ಅವನ ಕಣ್ಣು ಅವನೇ ನಂಬಲಾರ. ಇದೇನಿದು? ನದಿಯ ಪಕ್ಕ ಮರಳಿನ ಮೇಲೆ ಎಲ್ಲಿ ನೋಡಿದರಲ್ಲಿ ಮರಳಿನ ಲಿಂಗಗಳು. ನೂರಾರು, ಸಾವಿರಾರು ಲಿಂಗಗಳು. ಅನೇಕ ಆಕೃತಿಯ ಚಿಕ್ಕ, ದೊಡ್ಡ ಲಿಂಗಗಳು! ಅನೇಕ ಲಿಂಗಗಳ ಮೇಲೆ ಹೂವು ಪತ್ರೆಗಳು! ನದಿಯಲ್ಲಿ ಸ್ನಾನ ಮಾಡಿ ಮೇಲೆ ಬಂದವರೆಲ್ಲ ಮರಳಿನಲ್ಲಿ ಒಂದು ಲಿಂಗ ಮಾಡಿ, ಅದನ್ನು ಪೂಜಿಸಿ, ನಂತರ ದೇವಾಲಯಕ್ಕೆ ಹೋಗುತ್ತಿದ್ದಾರೆ. 

ಓಡಿ ಹೋಗಿ ತಾನು ತಂಬಿಗೆ ಹೂತಿಟ್ಟ ಜಾಗ ತಲುಪಿ ಅಲ್ಲಿದ್ದ ಲಿಂಗ ಬಗೆದು ಹುಡುಕಿದ. ತಂಬಿಗೆ ಇಲ್ಲ. ಪಕ್ಕದ ಲಿಂಗ ಬಗೆದ. ಅಲ್ಲೂ ತಂಬಿಗೆ ಇಲ್ಲ. ನಂತರ ಇನ್ನೊಂದು. ಆಮೇಲೆ ಮತ್ತೊಂದು. ಬಗೆಯುತ್ತಲೇ ಹೋದ. ಎಲ್ಲೂ ತಂಬಿಗೆ ಕಾಣಿಸಲೇ ಇಲ್ಲ. ಇವನು ಲಿಂಗಗಳನ್ನು ಬಗೆಯುತ್ತಿರುವುದನ್ನು ನೋಡಿದ ಕೆಲವು ಯಾತ್ರಿಕರು ಇವನಿಗೆ ಹೊಡೆಯಲು ಬಂದರು. ಅವರಿಂದ ತಪ್ಪಿಸಿಕೊಂಡು ಓಡಿದ. ಕಡೆಗೆ ಸುಸ್ತಾಗಿ ಒಂದು ಕಡೆ ಮರಳಿನ ಮೇಲೆ ಕುಳಿತ. 

ಆಮೇಲೆ ಅವನಿಗೆ ನಗು ಬಂತು. ಒಂದು ಕಡೆ ತಂಬಿಗೆ ಹೋದ ವ್ಯಥೆ. ಮತ್ತೊಂದು ಕಡೆ ಜನರು ಮಾಡುತ್ತಿರುವ ರೀತಿ ನೋಡಿ ವಿಸ್ಯಯ. ಇವನ ಮರಳಿನ ಗುಡ್ಡೆ ಕಂಡು ಯಾರೋ ಒಬ್ಬರು ತಾವೂ ಒಂದು ಮರಳಿನ ಲಿಂಗ ಮಾಡಿದರು. ಅದನ್ನು ನೋಡಿ ಮತ್ತೊಬ್ಬರು ಇನ್ನೂ ಒಂದು ದೊಡ್ಡ ಲಿಂಗ ಮಾಡಿದರು. ಮಗದೊಬ್ಬರು ಲಿಂಗ ಮಾಡಿ, ಪತ್ರೆ ಮತ್ತು ಹೂವು ಏರಿಸಿದರು. ನಂತರ ಬಂದವರು ಇದೇ ಇಲ್ಲಿನ ಕ್ರಮ ಎಂದು ಸೈಕತ ಲಿಂಗಗಳನ್ನು ಮಾಡಿ ಮಾಡಿ ಪೂಜಿಸಿದರು. ಈ ಲಿಂಗಗಳ ರಾಶಿಯಲ್ಲಿ ನಮ್ಮ ಕಥಾನಾಯಕನ ಮರಳ ಗುಡ್ಡೆ ಕಾಣದಾಯಿತು. ಒಟ್ಟಿನಲ್ಲಿ ಬಹಳ ಜಾಣ್ಮೆಯಿಂದ ಬಚ್ಚಿಟ್ಟಿದ್ದ ಅವನ ಜಜ್ಜಿದ ತಾಮ್ರದ ತಂಬಿಗೆ ವಿಶಾಲ ಮರಳಿನ ರಾಶಿಯಲ್ಲಿ ಎಲ್ಲೊ ಸೇರಿಹೋಯಿತು. 

ಆ ಪ್ರಪಂಚದಲ್ಲಿ ಜನರು ಹೇಗೆ ಒಬ್ಬರನ್ನು ಇನ್ನೊಬ್ಬರು ಅನುಕರಿಸುತ್ತಾರೆ ಎನ್ನುವುದು ಅವನಿಗೆ ಅರ್ಥ ಆಯಿತು. ತಲೆಯ ಮೇಲೆ ಕೈ ಇಟ್ಟುಕೊಂಡು ಹೀಗೆ ಹೇಳಿದ:

ಗತಾನುಗತಿಕೋ ಲೋಕಃ ನ ಲೋಕಃ ಪಾರಮಾರ್ಥಿಕಃ 
ಗಂಗಾಯಾಂ ಸೈಕತ ಲಿಂಗೇಷು ನಷ್ಟಮ್ ಮೇ ತಾಮ್ರಭಾಜನಂ 

"ಈ ಜಗತ್ತಿನಲ್ಲಿ ಎಲ್ಲರೂ ಒಬ್ಬರನ್ನು ಒಬ್ಬರು ಅನುಕರಿಸುವವರು. (ಯಾವ ಕೃತ್ಯವನ್ನೂ ಏಕೆ ಮಾಡುತ್ತಾರೆ ಎಂದು ಯೋಚಿಸದೆ ಅನುಕರಿಸುವವರು). ನಿಜವಾದ ಸತ್ಯದ ಅರಿವು ಹುಡುಕುವವರು ವಿರಳ. ಗಂಗಾ ನದಿಯ ಮರಳಿನ ಲಿಂಗಗಳಲ್ಲಿ ನನ್ನ ತಾಮ್ರದ ತಂಬಿಗೆ ಇದರಿಂದ ಕಳೆದುಹೋಯಿತು!

*****

ಹಿಂದಿನ ಎರಡು ಸಂಚಿಕೆಗಳಲ್ಲಿ "ಗತಾನುಗತಿಕೋ ಲೋಕಃ" ಎಂದು ಉಪಯೋಗಿಸಿದೆ. ಒಬ್ಬರ ಹಿಂದೊಬ್ಬರು ಕುರುಡು ಅನುಕರಣೆ ಮಾಡುವುದು ಎಂದು ಅದರ ಅರ್ಥ. "ಗತಾನುಗತಿಕೋ ಲೋಕಃ" ಎನ್ನುವುದನ್ನು ಅನೇಕರು ಬೇರೆ ಬೇರೆ ಸಂದರ್ಭಗಲ್ಲಿ ಬಳಸುತ್ತಾರೆ. ಅದರ ಮೂಲ ತಿಳಿಸುವ ಕಥೆ ಮೇಲೆ ಕೊಟ್ಟಿರುವುದು. ಮೊದಲಿನ ತರಗತಿಗಳಲ್ಲಿರುವ ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳಿಗೆ ಇದನ್ನು ಹೇಳುತ್ತಿದ್ದರು. ಕಥೆ ರಂಜಕವಾಗಿಯೂ ಇದೆ; ಒಳ್ಳೆಯ ಸಂದೇಶವನ್ನೂ ಕೊಡುತ್ತದೆ.   

Friday, February 16, 2024

ಕರಡಿಗೆಯಿಂದ ಬಂದ ಕರಡಿ


ಕೋಶಗಳಲ್ಲಿ ಕೋಶಕಾರರು ಸಮಾನಾರ್ಥಕ ಪದಗಳನ್ನು ಕೊಡುತ್ತಾರೆ. ಅವು ಒಂದೇ ಅರ್ಥ ಕೊಡುವ ಪದಗಳಾದರೂ ಪದ-ಪದಗಳಲ್ಲಿ ಸೂಕ್ಷ್ಮವಾದ ಅರ್ಥ ಭೇದ ಇರುತ್ತದೆ ಎನ್ನುವುದನ್ನು "ಅಳಿಯ ಅಲ್ಲ; ಮಗಳ ಗಂಡ" ಎನ್ನುವ ಶೀರ್ಷಿಕೆಯಡಿ ನೋಡಿದೆವು. ಕೋಶದಲ್ಲಿ ನೋಡಿದರೆ "ಅಳಿಯ" ಅನ್ನುವ ಪದಕ್ಕೆ ಕೊಟ್ಟಿರುವ ಸಮಾನಾರ್ಥಕ ಪದಗಳಲ್ಲಿ "ಮಗಳ ಗಂಡ" ಅನ್ನುವುದೂ ಒಂದು. ಆದರೆ ಅಳಿಯ ಮತ್ತು ಮಗಳ ಗಂಡ ಎನ್ನುವ ಎರಡು ಪ್ರಯೋಗಗಳ ಸಂದರ್ಭ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ನೋಡಿಯಾಯಿತು. 

"ಮಗಳ ಗಂಡ" ಎನ್ನುವ ಪದದಂತೆ "ಮಗನ ಹೆಂಡತಿ" ಎನ್ನುವ ಪದ ಪ್ರಯೋಗ ಏಕಿಲ್ಲ ಎಂದು ಕೆಲವು ಸ್ನೇಹಿತರು ಕೇಳಿರುತ್ತಾರೆ. ಒಂದು ವ್ಯಕ್ತಿಯನ್ನು ನಿರ್ದೇಶಿಸುವಾಗ "ಅವನು" ಎಂದು ಹೇಳುತ್ತಾರೆ. ಇಂಗ್ಲೀಷಿನಲ್ಲಿ ಹೇಳುವಂತೆ "He includes She" ರೀತಿ, ಮಗನ ಹೆಂಡತಿ ಪ್ರಾಯಶಃ ಮಗಳ ಗಂಡ ಅನ್ನುವುದರಲ್ಲೇ ಸೇರಿ ಹೋಗಿರಬೇಕು! 

"ಕೆಲವರು ಪದಗಳನ್ನು ಅಥವಾ ಪದಪುಂಜಗಳನ್ನು ತಪ್ಪಾಗಿ ಪ್ರಯೋಗಿಸಿ, ಅದನ್ನೇ ಮತ್ತನೇಕರು ಮುಂದುವರೆಸಿ, ಮುಂದೆ ಆ ತಪ್ಪೇ ಸರಿ ಎಂದು ಎಲ್ಲರೂ ತಿಳಿದು, ಆ ತಪ್ಪು ಪ್ರಯೋಗವೇ ಶಾಶ್ವತವಾಗಿ ಉಳಿಯಬಹುದು" ಎಂದು ಹಿಂದೆ ಹೇಳಲಾಗಿತ್ತು. ಅದರಲ್ಲಿಯೂ ಯಾರಾದರೂ ಹೆಸರು ಪಡೆದ ಜನ ಅಥವಾ ಪ್ರಭಾವಶಾಲಿಗಳು ಹೀಗೆ ಉಪಯೋಗಿಸಿದರೆ ಅದೇ ಭದ್ರವಾಗಿ ನಿಲ್ಲುತ್ತದೆ. "ಗತಾನುಗತಿಕೋ ಲೋಕಃ" ಅನ್ನುವಂತೆ ಒಬ್ಬರ ಹಿಂದೆ ಇನ್ನೊಬ್ಬರು. ಅಂತಹ ತಪ್ಪು ಪ್ರಯೋಗವೇ ಶಾಶ್ವತವಾಗಿ ನಿಂತಿರುವುದಕ್ಕೆ ಒಂದು ಅತ್ಯಂತ ಸುಂದರ ಉದಾಹರಣೆ "ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ" ಎನ್ನುವ ಇನ್ನೊಂದು ಪ್ರಸಿದ್ಧ ಗಾದೆ. 

*****

ಅವರವರ ಸಂಪ್ರದಾಯದಂತೆ, ತಾವು ಅನುಸರಿಸುವ ಆರಾಧನಾ ಕ್ರಮದಂತೆ ದೇವರ ಚಿಹ್ನೆಗಳನ್ನು ದೇಹದ ಮೇಲೆ ಧರಿಸುವುದು ಪ್ರಪಂಚದ ಎಲ್ಲಾ ಕಡೆ ಇರುವ ಪದ್ಧತಿ. ಅನೇಕ ಬಗೆಯ ಹಲವು ಬಣ್ಣ ಮತ್ತು ಆಕಾರದ ನಾಮಗಳು, ವಿಭೂತಿ, ಆಂಗಾರ ಮತ್ತು ಅಕ್ಷತೆ, ಕುಂಕುಮ-ಕೇಸರಿ, ಶಿಲುಬೆ, ಚಂದ್ರ ಮತ್ತು ನಕ್ಷತ್ರ ಇತ್ಯಾದಿ ಸಂಕೇತಗಳನ್ನು ಅನೇಕ ಜನರು ಧರಿಸುವುದನ್ನು ನಾವು ನೋಡಿದ್ದೇವೆ. ಈಚೆಗೆ ಇದು ಕಡಿಮೆ ಆಗಿದ್ದರೂ ಈಗಲೂ ಅನೇಕರು ಈ ರೀತಿ ಧರಿಸುತ್ತಾರೆ. ಕೆಲವು ವೈದಿಕರು ಜನಿವಾರ, ಪವಿತ್ರದುಂಗುರ ತೊಡುತ್ತಾರೆ. ಅಂತೆಯೇ ಅನೇಕ ಶಿವಾರಾಧಕರು ಒಂದು ಸಣ್ಣ ಶಿವಲಿಂಗವನ್ನು ತಮ್ಮ ಕೊರಳಲ್ಲಿ ಧರಿಸುತ್ತಾರೆ. ಕೆಲವರು ಒಂದು ಬಟ್ಟೆಯಲ್ಲಿ ಲಿಂಗವನ್ನು ಸುತ್ತಿ ಕುತ್ತಿಗೆಗೆ ಕಟ್ಟಿಕೊಳ್ಳಬಹುದು. ಮತ್ತೆ ಕೆಲವರು ಶಿವಲಿಂಗವನ್ನು ಅದಕ್ಕಾಗಿಯೇ ಮಾಡಿದ ಲೋಹದ ಸಂಪುಷ್ಟದಲ್ಲಿ ಇಟ್ಟು ದಾರದಿಂದ ಇಳಿಬಿಟ್ಟು ಕುತ್ತಿಗೆಗೆ ಧರಿಸಬಹುದು. ಈ ರೀತಿಯ ಸಂಪುಷ್ಟಕ್ಕೆ "ಕರಡಿಗೆ" ಎಂದು ಕರೆಯುತ್ತಾರೆ. 

ಹಿಂದೆ ತುಂಬಾ ಬಳಕೆಯಲ್ಲಿ ಇದ್ದ ಪದಗಳಲ್ಲಿ "ಕರಂಡಕ" ಅನ್ನುವುದೂ ಒಂದು. ಈ ಪದಕ್ಕೆ "ಬಟ್ಟಲು" ಅಥವಾ ಕಪ್ ಎಂದು ಅರ್ಥ. ಈ ಕರಂಡಕದಿಂದ ಹುಟ್ಟಿದ ಪದ ಕರಡಿಕೆ. ಬಟ್ಟಲಿನಂತಹ ಒಂದು ಸಂಪುಷ್ಟದಲ್ಲಿ ಸಣ್ಣ ಶಿವಲಿಂಗವನ್ನು ಇಟ್ಟು ತಿರುಪಿನ ಮುಚ್ಚಳದಿಂದ ಮುಚ್ಚುವಂತೆ ಮಾಡುತ್ತಾರೆ. ಅದರ ಅನೇಕ ರೂಪಾಂತರಗಳೂ ಉಂಟು. ಮೇಲೆ ಚಿತ್ರದಲ್ಲಿ ತೋರಿಸಿರುವ ಕರಡಿಕೆ ಹೆಚ್ಚು ಬಳಕೆಯಲ್ಲಿ ಇರುತ್ತದೆ. ಇದಕ್ಕೆ ಎರಡು ಕಡೆ ದಾರ ಪೋಣಿಸುವ ರೀತಿ ಮಾಡಿ ಪದಕದಂತೆ ಕೊರಳಲ್ಲಿ ಧರಿಸಬಹುದು. ಪಂಚಲೋಹದ, ಬೆಳ್ಳಿಯ ಅಥವಾ ಹೆಚ್ಚು ಅನುಕೂಲವಂತರು ಬಂಗಾರದಲ್ಲಿ ಮಾಡಿಸಿಕೊಂಡು ಕೊರಳಿಗೆ ಆಭರಣದ ರೀತಿ ಕಟ್ಟಿಕೊಳ್ಳುತ್ತಾರೆ.  

ನಾವು ಆಹಾರವಾಗಿ ಸೇವಿಸುವ ಯಾವ ಪದಾರ್ಥವಾದರೂ ಅದನ್ನು ಮೊದಲು ಪರಮಾತ್ಮನಿಗೆ ಅರ್ಪಿಸಿ (ನೈವೇದ್ಯ ಮಾಡಿ) ನಂತರ ಸೇವಿಸಬೇಕು ಎನ್ನುವುದು ಶ್ರದ್ಧಾಳುಗಳು ಪಾಲಿಸುವ ಸಂಪ್ರದಾಯ. ಜನಿವಾರ ಅಥವಾ ಯಜ್ನೋಪವೀತ ಧರಿಸಿದವರು ಊಟಕ್ಕೆ ಮೊದಲು ತಮ್ಮಲ್ಲೇ ಇರುವ ಪಂಚ ಪ್ರಾಣರೂಪಿ ಅಂತರ್ಗತನಾದ ಪರಬ್ರಹ್ಮನಿಗೆ ಮೊದಲು ಸಮರ್ಪಿಸಿ ನಂತರ ಊಟ ಮಾಡುತ್ತಾರೆ. ಅದೇ ರೀತಿ ಕರಡಿಗೆಯಲ್ಲಿ ಶಿವಲಿಂಗವನ್ನು ಧರಿಸಿದ ಶ್ರದ್ಧಾಳುಗಳು ಅದರಲ್ಲಿನ ಶಿವಲಿಂಗವನ್ನು ಅಂಗೈನಲ್ಲಿ ಹಿಡಿದು ಅದಕ್ಕೆ ಅರ್ಪಿಸಿ ನಂತರ ಭೋಜನ ಮಾಡುತ್ತಾರೆ. ಈ ರೀತಿ ನಿವೇದನ ಮಾಡುತ್ತಿರುವ ಅನೇಕ ಚಿತ್ರಗಳನ್ನು ನೋಡಬಹುದು. ಕೊರಳಲ್ಲಿ ಕರಡಿಗೆಯಲ್ಲಿ ಶಿವಲಿಂಗವನ್ನು ಧರಿಸುವುದಕ್ಕೆ ಬಹಳ ಗೌರವ ಉಂಟು. ಸಾಮಾನ್ಯವಾಗಿ ಒಂದು ಸಮಾರಂಭದಲ್ಲಿ ಗುರುಗಳು ಉಪದೇಶ ಮಾಡಿ ಆರಾಧನೆಯ ರೀತಿಯನ್ನು ವಿವರಿಸಿ ಈ ರೀತಿಯ ಶಿವಪೂಜೆ ದಾರಿಯನ್ನು ತಿಳಿಸುತ್ತಾರೆ. ಇದು ಒಂದು ಸಂಕೇತವಾಗಿ ಪರಶಿವನು ಧರಿಸಿದವರ ಆಚಾರ-ವಿಚಾರ ಶುದ್ಧವಾಗಿರಲು ಅನುಗ್ರಹಿಸುತ್ತಾನೆ ಎಂದು ನಂಬಿಕೆ. 

*****

ಶಿವಪೂಜೆ ಮಾಡಲು ಏನೇನು ಸಾಧನಗಳು ಬೇಕು? ಶಿವನು ಅಭಿಷೇಕ ಪ್ರಿಯನು ಎಂದು ನಂಬಿಕೆ. ಅದಕ್ಕೆ ಮೋದಲಿಗೆ ಶುದ್ಧವಾದ ನೀರು ಬೇಕು. ಶಿವನಿಗೆ ಬಿಲ್ವಪತ್ರೆ ಅತಿ ಪ್ರಿಯ. ಆ ಪತ್ರೆ ಬೇಕು. ಇನ್ನೂ ಮುಂದೆ ಹಾಲು, ಮೊಸರು, ಜೇನು ತುಪ್ಪ, ತುಪ್ಪ, ಎಳನೀರು, ಸಕ್ಕರೆ, ಹೂವುಗಳು, ಧೂಪ, ದೀಪ, ಊದುಬತ್ತಿ, ಕರ್ಪೂರ, ನೈವೇದ್ಯಕ್ಕೆ ಪದಾರ್ಥಗಳು ಇತ್ಯಾದಿ. ಆದರೆ ಯಾವುದು ಇಲ್ಲದಿದ್ದರೂ ನೀರು, ಬಿಲ್ವ ಪತ್ರೆ, ಮತ್ತು ಏನಿಲ್ಲದಿದ್ದರೂ ನೈವೇದ್ಯಕ್ಕೆ ಒಂದು ಬೆಲ್ಲದ ತುಂಡು ಅಥವಾ ಕಲ್ಲು ಸಕ್ಕರೆಯೋ ಇತ್ಯಾದಿ ಶಿವ ಕೊಟ್ಟಿದ್ದು. ಈ ಪದಾರ್ಥಗಳಿದ್ದರೆ ಶ್ರದ್ದಾಭಕ್ತಿಗಳಿದ್ದರೆ ಶಿವಪೂಜೆ ಆಯಿತು. ಮಿಕ್ಕಿದ್ದಲ್ಲ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ. ಶಿವನು ಯಾವ ಆಡಂಬರವನ್ನೂ ಕೇಳುವವನಲ್ಲ. 

ಆಯಿತು. ಮೇಲೆ ಹೇಳಿದ ಎಲ್ಲವೂ ತಯಾರಾಯಿತು. ಸಮಸ್ತವೂ ಉಂಟು. ಆದರೆ ಕರಡಿಗೆಯೇ ಇಲ್ಲ. ಕರಡಿಗೆ ಇಲ್ಲ ಅಂದರೆ ಶಿವಲಿಂಗ ಇಲ್ಲ. ಶಿವಲಿಂಗವೇ ಇಲ್ಲ ಅಂದರೆ ಎಲ್ಲಿಯ ಶಿವಪೂಜೆ? ಎಲ್ಲ ವಸ್ತುಗಳಿಗಿಂತಲೂ ಅತ್ಯಂತ ಮುಖ್ಯ ಬೇಕಾದದ್ದು ಶಿವಲಿಂಗ. ಅದು ಕರಡಿಗೆಯಲ್ಲಿ ಇದೆ. ಅದನ್ನೇ ಮರೆತರೆ ಹೇಗೆ?

ಯಾವುದಾದರೂ ಸಂದರ್ಭದಲ್ಲಿ ಅತಿ ಮುಖ್ಯವಾದದ್ದನ್ನು ತರುವುದು ಮರೆತು ಬಿಟ್ಟರೆ ಶಿವಪೂಜೆಯಲ್ಲಿ ಕರಡಿಗೆಯನ್ನು ಬಿಟ್ಟಂತೆ ಎಂದು ಹೇಳುವ ರೀತಿ ಇದರಿಂದ ಬಂತು. ಮುಂದೆ ಅದರಿಂದಲೇ "ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ" ಎಂದು ಹೇಳುವ ಗಾದೆ ಬಂತು!

*****

ಕಾಲಕ್ರಮದಲ್ಲಿ ಯಾರೋ ಒಬ್ಬರು "ಕರಡಿಗೆ" ಪದದಲ್ಲಿನ "ಗೆ" ಬಿಟ್ಟರು! ಕರಡಿಗೆಯ ಬದಲು ಕರಡಿ ಎಂದು ಪ್ರಯೋಗವಾಯಿತು. ಶಿವಪೂಜೆಯಲ್ಲಿ ಕರಡಿ ಬಂದರೆ ಏನಾಗುತ್ತದೆ? ಅದನ್ನು ನೋಡಿದವರು ಚೆಲ್ಲಾಪಿಲ್ಲಿಯಾಗಿ ಓಡುತ್ತಾರೆ. ಅದಕ್ಕೆ ಸ್ವಾತಂತ್ರ್ಯ ಸಿಕ್ಕರೆ ಎಲ್ಲೆಂದರಲ್ಲಿ ನುಗ್ಗಿ ಎಲ್ಲವನ್ನೂ ಧ್ವಂಸ ಮಾಡುತ್ತದೆ. ಒಟ್ಟಿನಲ್ಲಿ, ಸುಖಮಯವಾಗಿ ನಡೆಯುತ್ತಿದ್ದ ಕಾರ್ಯಕ್ರಮ ಹಾಳಾಗುತ್ತದೆ. ಇದು ಶಿವಪೂಜೆಯಲ್ಲಿ ಕರಡಿ ಬಿಟ್ಟರೆ ಆಗುವ ಪರಿಣಾಮ. 

ವಿಚಿತ್ರವೆಂದರೆ, ಕರಡಿಗೆ ಬಹಳ ಜನರಿಗೆ ಗೊತ್ತಿಲ್ಲ. ಆದರೆ ಕರಡಿ ಎಲ್ಲರಿಗೂ ಗೊತ್ತು. ಕರಡಿಗೆ ಬಿಟ್ಟಂತೆ ಎಂದರೆ ಅನೇಕರಿಗೆ ಅರ್ಥ ಆಗುವುದಿಲ್ಲ. ಕರಡಿ ಬಿಟ್ಟರು ಅಂದರೆ ಎಲ್ಲರಿಗೂ ಗೊತ್ತು. ಕರಡಿ ಬಿಡುವುದು ಮನಸ್ಸಿಗೆ ರಂಜಕವೂ ಹೌದು. ಈ ಕಾರಣಗಳಿಂದ "ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ" ಎನ್ನುವುದು ತಪ್ಪು ಪ್ರಯೋಗವಾದರೂ ಬಹಳ ಜನಪ್ರಿಯವಾಯಿತು. ಒಂದು ಒಳ್ಳೆಯ ಕೆಲಸ ನಡೆಯುವಾಗ ಯಾರೋ ಅಥವಾ ಏನೋ ಬಂದು ಆ ಒಳ್ಳೆಯ ಕೆಲಸ ಹಾಳಾಗುವುದನ್ನು ನಿರ್ದೇಶಿಸುವುದಕ್ಕೆ ಈ ರೂಪಾಂತರಿತ ಗಾದೆ ಉಪಯೋಗವಾಯಿತು. 

ಕೊನೆಗೆ "ಶಿವಪೂಜೆಯಲ್ಲಿ ಕರಡಿಗೆ ಬಿಟ್ಟರು" ಮರೆತುಹೋಗಿ, "ಶಿವಪೂಜೆಯಲ್ಲಿ ಕರಡಿ ಬಿಟ್ಟರು" ಉಳಿದುಕೊಂಡಿತು. 

ಒಬ್ಬರು ತಪ್ಪು ಪ್ರಯೋಗಿಸಿ, ಅದನ್ನೇ ಮತ್ತನೇಕರು ಮುಂದುವರೆಸಿ, ಮುಂದೆ ಆ ತಪ್ಪೇ ಸರಿ ಎಂದು ಎಲ್ಲರೂ ತಿಳಿದು, ಆ ತಪ್ಪು ಪ್ರಯೋಗವೇ ಶಾಶ್ವತವಾಗಿ ಉಳಿಯಿತು!